Site icon Vistara News

Karnataka Election: ಹಣಕ್ಕಾಗಿ ಪ್ರಚಾರ; ಸಂಬರ್ಗಿ ಹೇಳಿಕೆಗೆ ಡೋಂಟ್ ಕೇರ್ ಎಂದ ನಟ ಶಿವಣ್ಣ

propaganda for money, Don't care about prashanth Sambargi's statement, says Actor Shivarajkumar

ಬೀದರ್: ದೇಶದಲ್ಲಿ ಎಷ್ಟೋ ಜನ ಸಾವಿರ ಮಾತು ಮಾತನಾಡುತ್ತಾರೆ, ಅದನ್ನು ಕೇರ್ ಮಾಡಿ ಬದುಕಲು ಆಗುವುದಿಲ್ಲ. ಮನುಷ್ಯನ ಹೃದಯಕ್ಕೆ ಏನು ಎನಿಸುತ್ತದೋ ಅದನ್ನು ಮಾಡಿಕೊಂಡು ಇದ್ದರೇ ಮಾತ್ರ ಮನುಷ್ಯ ಎನ್ನುವುದು. ಸಂಬರ್ಗಿ ಹೇಳಿಕೆಯಿಂದ (Karnataka Election), ನನಗೆ ನನ್ನ ಅಭಿಮಾನಿಗಳಿಗೆ ಯಾವುದೇ ರೀತಿಯ ಹರ್ಟ್ ಆಗಿಲ್ಲ. ಇಂತಹ ಹೇಳಿಕೆಗಳಿಗೆ ಕೇರ್ ಮಾಡಲು ಹೋಗಬೇಡಿ ಎಂದು ಅಭಿಮಾನಿಗಳಿಗೆ ನಟ ಶಿವರಾಜ್‌ ಕುಮಾರ್‌ ಕಿವಿ ಮಾತು ಹೇಳಿದ್ದಾರೆ.‌

ನಟ ಶಿವಣ್ಣ ಹಣಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ಬೀದರ್‌ ದಕ್ಷಿಣ ಕ್ಷೇತ್ರದ ಮನ್ನಾಖೇಳಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಖೇಣಿ ಪರ ಭಾನುವಾರ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ ಅವರು, ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ಫುಲ್‌ಸ್ಟಾಪ್ ಹಾಕಬೇಕು, ಇದು ಅನಗತ್ಯ. ಟ್ರೋಲ್‌ ಆದರೆ ಆಗಲಿ ಬಿಡಿ, ಇದರಿಂದ ನನಗೇನು ಎನಿಸುವುದಿಲ್ಲ. ಟ್ರೋಲ್‌ ಎಂಬುವುದು ಎಲ್ಲರಿಗೂ ಸುಲಭವಾಗಿಬಿಟ್ಟಿದೆ. ಯಾವ ಉದ್ದೇಶಕ್ಕೆ ಟ್ರೋಲ್‌ ಆಗಬೇಕು? ನಮಗೆ ಗೊತ್ತಿರುವ ವ್ಯಕ್ತಿಗಳ ಬಗ್ಗೆ ಪ್ರಚಾರದಲ್ಲಿ ನಾನು ಮಾತನಾಡುವೆ. ವೈಯಕ್ತಿಕವಾಗಿ ನಾನು ಬೇರೆಯವರ ಬಗ್ಗೆ ಟೀಕಿಸುವುದಿಲ್ಲ, ದೂಷಿಸುವುದಿಲ್ಲ ಎಂದರು.

ಇದನ್ನೂ ಓದಿ | Karnataka Election: ವರ್ಚಸ್ಸು ಕುಂದಿದ್ದೇ ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪಲು ಕಾರಣ; ಲಿಂಗಾಯತರಿಗೆ ಅನ್ಯಾಯ ಆಗಿಲ್ಲ: ವಿಜಯ ಸಂಕೇಶ್ವರ

ಅಶೋಕ್ ಖೇಣಿ, ಜಗದೀಶ್ ಶೆಟ್ಟರ್‌, ಭೀಮಾ ನಾಯಕ್ ಬಗ್ಗೆ ಮಾತನಾಡುತ್ತೇನೆ. ಸಂಬರ್ಗಿ ಹೇಳಿಕೆಗೆ ಡೋಂಟ್ ಕೇರ್. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿಯನ್ನು ಆಯ್ಕೆ ಮಾಡಿ. ಒಳ್ಳೆ ಮನುಷ್ಯರನ್ನು ಗೆಲ್ಲಿಸಿ ಎಂದು ಮತದಾರರಿಗೆ ಶಿವರಾಜ್‌ ಕುಮಾರ್‌ ಮನವಿ ಮಾಡಿದರು.‌

ಪ್ರಚಾರದ ವೇಳೆ ಹಾಡು ಹೇಳಿದ ಶಿವರಾಜ್‌ ಕುಮಾರ್

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಖೇಳಿ ಗ್ರಾಮದಲ್ಲಿ‌ ನಟ ಶಿವರಾಜ್‌ ಕುಮಾರ್ ಅವರು ರೋಡ್ ಶೋ‌ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಖೇಣಿ ಪರ ಮತಯಾಚನೆ ಮಾಡಿದರು. ಪ್ರಚಾರದ ವೇಳೆ ಶಿವಣ್ಣ ಹಾಡು ಹಾಡಿ ಅಭಿಮಾನಿಗಳನ್ನು ಸಂಭ್ರಮಿಸಿದ್ದು ಕಂಡುಬಂತು.

ಇದನ್ನೂ ಓದಿ | Karnataka Election 2023: ಬೆಳಗಾವಿ ಔದ್ಯೋಗೀಕರಣ ನನ್ನ ಮೊದಲ ಆದ್ಯತೆ: ಡಾ. ರವಿ ಪಾಟೀಲ್

ಮುಖ ನೋಡಿ ಮೊಳ ಹಾಕಬೇಡ, ಗುಣ ನೋಡಿ ಅಳಿಯಮ್ಮ… ಎಂಬ ಹಾಡನ್ನು ಅವರು ಪ್ರಚಾರದ ವೇಳೆ ಹಾಡಿ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ ಖೇಣಿ ಗುಣ ನೋಡಿ ಈ ಬಾರಿ ವೋಟ್ ಹಾಕಿ ಎಂದು ಮತಯಾಚನೆ ಮಾಡಿದರು. ಅಶೋಕ್‌ ಖೇಣಿ ಅವರ ಕ್ರಮ ಸಂಖ್ಯೆ ಒಂದು ಇದೆ, ಅದಕ್ಕೆ ವೋಟ್ ಹಾಕಿ ಎಂದು ಜನರಲ್ಲಿ ಮನವಿ ಮಾಡಿದರು.

Exit mobile version