Site icon Vistara News

Lok Sabha Election 2024 : ಸಿದ್ದರಾಮಯ್ಯ Right ಎಂದ ರಾಹುಲ್‌; 5 ಗ್ಯಾರಂಟಿಯಂತೆ ಲೋಕಸಭೆ ಸಮರಕ್ಕೆ ಕೈ ಪ್ಲ್ಯಾನ್!

Rahul Gandhi and Modi

ನವ ದೆಹಲಿ: ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka Politics) ನಡೆಯುತ್ತಿರುವ ಬೆಳವಣಿಗೆ, ಕಾಂಗ್ರೆಸ್‌ ಆಂತರಿಕ ತಿಕ್ಕಾಟ ಹಾಗೂ ಲೋಕಸಭಾ ಚುನಾವಣೆಗೆ (Lok Sabha Election 2024) ರಣತಂತ್ರ ಹೆಣೆಯುವ ನಿಟ್ಟಿನಲ್ಲಿ ನವ ದೆಹಲಿಯಲ್ಲಿ ಬುಧವಾರ (ಆಗಸ್ಟ್‌ 2) ನಡೆದ ಹೈಕಮಾಂಡ್‌ ಜತೆಗಿನ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್‌ (Karnataka Politics) ಸರ್ಕಾರದ ಬಗ್ಗೆ ಶಹಬ್ಬಾಸ್‌ಗಿರಿ ವ್ಯಕ್ತವಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಆಡಿದ ಕೆಲವು ಮಾತುಗಳನ್ನು ಸರಿ (you are Right) ಎಂದು ಹೊಗಳಿದ್ದಾರೆ. ಜತೆಗೆ ಆರ್ಥಿಕ ಹೊರೆಯಾಗದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೀರಿ ಎಂದು ಬೆನ್ನು ತಟ್ಟಿದ್ದಾರೆ. ಈ ಮೂಲಕ ಕರ್ನಾಟಕವು ದೇಶಕ್ಕೇ ಒಂದು “Economic model” ಅನ್ನು ರೂಪಿಸಿ ಕೊಟ್ಟಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಮೆಚ್ಚುಗೆಯ ಅಭಿಪ್ರಾಯಗಳು ಇವು

ಇದನ್ನೂ ಓದಿ: Karnataka Politics : ಲೋಕಸಭೆಯಲ್ಲಿ ಕಾಂಗ್ರೆಸ್‌ ಮನೆಯವರಿಗೆ ಮಣೆ! ಕುಟುಂಬ ರಾಜಕಾರಣ?

Exit mobile version