Site icon Vistara News

Murder Case: ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಪತಿ

wife murder

ರಾಯಚೂರು: ಪತ್ನಿಯ ನಡತೆಯನ್ನು ಮದುವೆಯಾದಂದಿನಿಂದಲೂ ಶಂಕಿಸುತ್ತಿದ್ದ ಕಿರಾತಕ ಪತಿಯೊಬ್ಬ ಪತ್ನಿಯನ್ನು ಕೊಲೆಗೈದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪೂರು ಗ್ರಾಮದಲ್ಲಿ ನಡೆದಿದೆ.

ಮಮತಾ @ ಪವಿತ್ರಾ (22) ಕೊಲೆಯಾದ ಮಹಿಳೆ. ಪತ್ನಿಯ ಶೀಲ ಶಂಕಿಸಿ ಕೊಂದ ಪಾಪಿ ಪತಿ ನಾಗೇಶ್. 3-4 ವರ್ಷಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿತ್ತು. ಮದುವೆಯಾದ ಬಳಿಕ ಹೆಂಡತಿಯ ಬಗ್ಗೆ ನಿತ್ಯ ಅನುಮಾನ ಪಡುತ್ತಿದ್ದ ನಾಗೇಶ್, ಅನೈತಿಕ ಸಂಪರ್ಕ ಹೊಂದಿದ್ದೀಯಾ ಎಂದು ನಿತ್ಯ ‌ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಮತಾ ತವರು ಮನೆಗೆ ಮಾಹಿತಿ ಮುಟ್ಟಿಸಿದ್ದಳು. ಮನೆಯವರು ಕರೆದು ಬುದ್ಧಿವಾದ ಹೇಳಿದ್ದರೂ ನಾಗೇಶ ಕಿರುಕುಳ ಮುಂದುವರಿಸಿದ್ದ.

ನಿನ್ನೆ ಬ್ರಿಕ್ಸ್ ಕಂಪನಿಯ ಕೆಲಸ ಹೋಗಿದ್ದ ಮಮತಾಳನ್ನು ನಾಗೇಶ ಕೆಲಸದಿಂದ ಅರ್ಧಕ್ಕೆ ಕರೆತಂದಿದ್ದ. ಬಳಿಕ ಮನಬಂದಂತೆ ಮಮತಾ ಮೇಲೆ ‌ಮಾರಣಾಂತಿಕ ಹಲ್ಲೆ ನಡೆಸಿದ್ದು, ಗೋಡೆಗೆ ತಲೆಯನ್ನು ಜಜ್ಜಿ ಕೊಂದುಹಾಕಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾತಕಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Murder Case: ಕಲಬುರಗಿಯಲ್ಲಿ ಪತ್ನಿ ಶೀಲ ಶಂಕಿಸಿದ ಪತಿ; ಮಲಗಿದ್ದವಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

Exit mobile version