Site icon Vistara News

Prajadhwani : ರಾಮನಗರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ರದ್ದು ಮಾಡಿದ್ದರ ಕುರಿತು ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

prajadhwani-programme postponed in ramanagar

ಬೆಂಗಳೂರು: ರಾಮನಗರದಲ್ಲಿ ಪ್ರಜಾಧ್ವನಿ (Prajadhwani) ಕಾರ್ಯಕ್ರಮ ರದ್ದು ಮಾಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ರಾಮನಗರ ಕಾರ್ಯಕ್ರಮ ನಡೆಯುತ್ತಿಲ್ಲ ಎಂದು ಚರ್ಚೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದರು. ರಾಮನಗರ ನಮ್ಮ ಪಕ್ಕದ ಕ್ಷೇತ್ರ. ನಮಗೆ ಇರೋದು ಒಂದೇ ದಿನ ಸಮಯ. ಅವತ್ತು ಹೊಸದಾಗಿ ರಚನೆ ಆಗಿರುವ ಪ್ರಚಾರ ಸಮಿತಿ ಸಭೆ ಇದೆ.

ಸೋತ ಅಭ್ಯರ್ಥಿಗಳು, ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಸಭೆ ಕರೆದಿದ್ದೇನೆ. ನಮ್ಮ ರಾಜ್ಯದ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ ಅಲ್ಲಿ. ನಾವು ಕೊಟ್ಟ ಗ್ಯಾರಂಟಿಗಳ ಬಗ್ಗೆ, ನಮ್ಮ ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ. ಮುಂದಿನ ಕಾರ್ಯತಂತ್ರ ರೂಪಿಸುತ್ತೇವೆ. ಆಗಮಿಸಿದವರಿಗೆಲ್ಲ ಟಾಸ್ಕ್‌ ಕೊಡಬೇಕಿದೆ. ಅದೇ ದಿನ ಎಂ.ಬಿ. ಪಾಟೀಲ್ ಮನೆಯ ಕಾರ್ಯಕ್ರಮವೂ ಇದೆ.

ಇದನ್ನೂ ಓದಿ : ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ; ಶೀಘ್ರ ಪ್ರಣಾಳಿಕೆ ಪ್ರಕಟಣೆ ಭರವಸೆ

ಈ ದೃಷ್ಟಿಯಿಂದ ರಾಮನಗರದ ಕಾರ್ಯಕ್ರಮ ಮುಂದೂಡಿಕೆ ಮಾಡಿದ್ದೇವೆ. ರಾಮನಗರ ಇಲ್ಲೇ ಪಕ್ಕದಲ್ಲಿ ಇದೆ, ಯಾವಾಗ ಬೇಕಾದರೂ ಕಾರ್ಯಕ್ರಮ ಮಾಡುತ್ತೇವೆ ಎಂದರು.

Exit mobile version