Site icon Vistara News

Chain Snatch | ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ಮಹಿಳೆಯನ್ನು ಸೆರೆ ಹಿಡಿದ ಗ್ರಾಮಸ್ಥರು

ಬೆಲ್ ಬಾಟಂ ಫಿಲ್ಮ್‌ ಸ್ಟೈಲ್‌ ಕಳ್ಳತನ

ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಮಹಿಳೆ ಹಾಗೂ ಮತ್ತೊಬ್ಬ ವ್ಯಕ್ತಿ ಬೈಕ್‌ನಲ್ಲಿ ಆಗಮಿಸಿ, ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕದಿಯುತ್ತಿದ್ದರು. ಅದೇ ರೀತಿ, ಈ ಇಬ್ಬರು ರಾಮನಗರ ಜಿಲ್ಲೆಯ ಹೊಡಿಕೆಹೊಸಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬಳಿಗೆ ಪ್ರಜ್ಞ ತಪ್ಪಿಸಿ, ಚಿನ್ನದ ಸರ ಕದ್ದು ಮತ್ತೊಂದು ಊರಿಗೆ ಪರಾರಿಯಾಗುತ್ತಿದ್ದರು. ಈ ಸುದ್ದಿ ತಿಳಿದ ಚನ್ನಪಟ್ಟಣ ತಾಲೂಕಿನ ಅರಾಳುಸಂದ್ರ ಗ್ರಾಮಸ್ಥರು ಈ ಕಳ್ಳರನ್ನು ಬೆನ್ನಟ್ಟಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೆರೆ ಸಿಕ್ಕ ಮಹಿಳೆಯನ್ನು ಗ್ರಾಮಸ್ಥರು ಚನ್ನಪಟ್ಟಣ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಕೆಯ ಸಹಚರ ಹಾಗೂ ಬೈಕ್ ಸವಾರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಬಂಧಿತ ಮಹಿಳೆಯನ್ನು ವಿಚಾರಣೆಗೊಳಪಡಿಸಿದ್ದಾರೆ.

Exit mobile version