Site icon Vistara News

Ramanagara News | ಹೋಟೆಲ್‌ನಲ್ಲಿ ಯುವಕ ನೇಣಿಗೆ ಶರಣು

ramanagara suicide ramgad hotel

ರಾಮನಗರ: ರಾಮನಗರದ (Ramanagara News) ರಾಮ್ ಘಡ್ ಎಂಬ ಹೋಟೆಲ್‌ನ ಕೊಠಡಿಯಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಾಜಿ ( 23) ನೇಣಿಗೆ ಶರಣಾದ ವ್ಯಕ್ತಿ. ಈತ ರಾಮನಗರ ಟೌನ್‌ನ ಗಾಂಧಿ ನಗರದ ನಿವಾಸಿಯಾಗಿದ್ದಾನೆ. ಬಾಲಾಜಿ ಗುರುವಾರ ಬೆಳಗ್ಗೆ (ಡಿ.೮) ಹೋಟೆಲ್‌ನಲ್ಲಿ ರೂಮ್‌ ಪಡೆದಿದ್ದ. ಚೆಕ್ ಔಟ್ ಮಾಡಲು ಲಾಡ್ಜ್ ಸಿಬ್ಬಂದಿಯು ಶುಕ್ರವಾರ (ಡಿ.೯) ದೂರವಾಣಿ ಕರೆ ಮಾಡಿದ್ದರು. ಆದರೆ, ಕರೆಯನ್ನು ಸ್ವೀಕರಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕೊಠಡಿ ಬಳಿ ಹೋಗಿ ಈತನನ್ನು ಕರೆದಿದ್ದಾರೆ. ಆಗಲೂ ಸಹ ರೂಮಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಕಿಟಕಿ ಬಳಿ ಪರಿಶೀಲನೆ ನಡೆಸಿದಾಗ ರೂಮಿನ ಕಿಟಕಿಗೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಸ್ಥಳಕ್ಕೆ ಐಜೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | ಶರತ್‌ ಬಚ್ಚೇಗೌಡಗೆ ಕಾಂಗ್ರೆಸ್‌ ಟಿಕೆಟ್‌ ಬೇಡ: ಮೂಲ ಕಾಂಗ್ರೆಸ್‌ ಸಭೆಯಲ್ಲಿ ಒತ್ತಾಯ, ಜಟಾಪಟಿ

Exit mobile version