Site icon Vistara News

Road Accident | ವಾಯವ್ಯ ಸಾರಿಗೆ-ಬೈಕ್‌ ನಡುವೆ ಅಪಘಾತ; ಇಬ್ಬರು ಬೈಕ್‌ ಸವಾರರು ಸಾವು

ಬಾಗಲಕೋಟೆ: ಇಲ್ಲಿನ ಸೀಗಿಕೇರಿ ಕ್ರಾಸ್‌ ಬಳಿ ವಾಯವ್ಯ ಕರ್ನಾಟಕ ಸಾರಿಗೆ ಹಾಗೂ ಬೈಕ್‌ ನಡುವೆ (Road Accident) ಡಿಕ್ಕಿಯಾಗಿದೆ. ಪರಿಣಾಮ ಬೈಕ್‌ ಸವಾರಿರಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರು ಸೀಗಿಕೇರಿ ಗ್ರಾಮದವರು ಎಂದು ತಿಳಿದುಬಂದಿದೆ. ಬೈಕ್ ಸವಾರ ಶ್ರೀನಿವಾಸ ಹಂಸನೂರು (೩೨) ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟರೆ, ಈಶ್ವರ ಮಾಚಕನೂರು (೫೪) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೆಬಿಹಾಳದಿಂದ‌ ಬಾಗಲಕೋಟೆ ಮಾರ್ಗವಾಗಿ ವಾಯವ್ಯ ಬಸ್ ಬರುತ್ತಿತ್ತು. ಬಾಗಲಕೋಟೆಯಿಂದ ಸೀಗಿಕೇರಿ ಕಡೆ ಬರುತ್ತಿದ್ದ ಬೈಕ್ ಸವಾರರಿಗೆ ಬಸ್‌ ಹಾಗೂ ಬೈಕ್‌ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಇದನ್ನೂ ಓದಿ | Cyrus Mistry Death | ಸೈರಸ್‌ ಮಿಸ್ತ್ರಿ ಮೃತಪಟ್ಟ ರಸ್ತೆಯಲ್ಲಿ ಇದೇ ವರ್ಷ ಅಪಘಾತಕ್ಕೆ 62 ಜನ ಬಲಿ!

Exit mobile version