Site icon Vistara News

Road Accident : ಬೈಕ್‌ಗಳ ನಡುವೆ ಅಪಘಾತ; ಅಜ್ಜ ಸ್ಥಳದಲ್ಲೇ ಮೃತ್ಯು; ಮೊಮ್ಮಗನಿಗೆ ಗಾಯ

Road accident near Mysore

ಮೈಸೂರು: ಬೈಕ್‌ಗಳ ನಡುವೆ ಭೀಕರ ಅಪಘಾತ (Two biked collide each other) ಸಂಭವಿಸಿ ತಾತ ಮೃತಪಟ್ಟು, ಮೊಮ್ಮಗ ಗಾಯಗೊಂಡ ಘಟನೆ ಹುಣಸೂರಿನಲ್ಲಿ ಸಂಭವಿಸಿದೆ. ಹುಣಸೂರು ನಗರದ ಬ್ಯಾಂಕ್ ಆಫ್ ಬರೋಡಾ ಬಳಿ ನಡೆದ ಅಪಘಾತದಲ್ಲಿ (Road accident) ಹುಣಸೂರು ತಾಲೂಕಿನ ರೆಡ್ಡಿಕೊಪ್ಪಲಿನ ರಾಮಶೆಟ್ಟಿ (72) ಮೃತಪಟ್ಟಿದ್ದಾರೆ.

ರಾಮ ಶೆಟ್ಟಿ ಅವರು ತಮ್ಮ ಮೊಮ್ಮಗ ವಿನಯ್‌‌ನನ್ನು ಕೂರಿಸಿಕೊಂಡು ಬೈಕ್‌ನಲ್ಲಿಸ ಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬುಲೆಟ್‌ ಬೈಕ್‌ ಅವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಹೊಡೆತಕ್ಕೆ ಬೈಕ್‌ ರಾಮ ಶೆಟ್ಟಿ ಅವರ ಬೈಕ್‌ ಉರುಳಿಬಿದದ್ದಿದೆ. ಕೆಳಗೆ ಬಿದ್ದ ರಾಮ ಶೆಟ್ಟಿ ತಲೆ ಮತ್ತು ಕೈಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿತ್ತು. ಅವರನ್ನು ಕೂಡಲೇ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ. ಮೃತಪಟ್ಟರು. ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಂಬೆಳಗ್ಗೆ ಟ್ರ್ಯಾಕ್ಟರ್‌ಗೆ ಕಾರುಗಳು ಡಿಕ್ಕಿಯಾಗಿ ಮೂರು ಸಾವು

ಮಂಗಳವಾರ ಮುಂಜಾನೆ ಪಿರಿಯಾಪಟ್ಟಣದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌ಗೆ ಎರಡು ಕಾರುಗಳು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದರು.

ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದ ಬಳಿ ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಕೆಟ್ಟು ನಿಂತಿತ್ತು. ಮಂಗಳವಾರ ಮುಂಜಾನೆ 4.30ರ ಹೊತ್ತಿಗೆ ಈ ಟ್ರ್ಯಾಕ್ಟರ್​ಗೆ ಎರಡು ಕಾರುಗಳು ಡಿಕ್ಕಿಯಾಗಿವೆ. ಎರಡೂ ಕಾರುಗಳಲ್ಲಿದ್ದ ಮೂವರು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ.

Rakesh died in accident neat hesaraghatta

ಮುದಾಸೀರ್, ಮುಜಾಯಿದ್​, ಅಹ್ಮದ್​ ಪಾಷಾ ಮೃತಪಟ್ಟವರು. ಇನ್ನು ಗಾಯಗೊಂಡ ಮೂವರ ಹೆಸರು ಗೊತ್ತಾಗಿಲ್ಲ. ಎರಡೂ ಕಾರುಗಳೂ ಪಿರಿಯಾಪಟ್ಟಣದಿಂದ ಹುಣಸೂರಿಗೆ ಪ್ರಯಾಣ ಮಾಡುತ್ತಿದ್ದವು. ಬೆಳಗಿನ ಜಾವದ ಕತ್ತಲಲ್ಲಿ ಸರಿಯಾಗಿ ಕಾಣಿಸದೆ ಟ್ರ್ಯಾಕ್ಟರ್​ಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬೈಕ್‌ಗಳ ನಡುವೆ ಡಿಕ್ಕಿ: ಎಂಜಿನಿಯರಿಂಗ್‌ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ದಾಸರಹಳ್ಳಿ (ಬೆಂಗಳೂರು): ಬೆಂಗಳೂರು ಹೊರವಲಯದಲ್ಲಿ ಹೆಸರಘಟ್ಟ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿ ರಾಕೇಶ್ ಎಚ್ (22) ಮೃತಪಟ್ಟವರು.

ಹೆಸರಘಟ್ಟ ಮುಖ್ಯ ರಸ್ತೆಯ ಎಜಿಬಿ ಬಡಾವಣೆ ಬಳಿ ಘಟನೆ ನಡೆದಿದೆ. ರಾಕೇಶ್‌ ಅವರು ನಾಲ್ಕು ತಿಂಗಳ ಹಿಂದಷ್ಟೇ ಕೆಟಿಎಂ ಡ್ಯೂಕ್‌ ಬೈಕ್‌ನ್ನು ಖರೀದಿಸಿದ್ದರು. ಅದರಲ್ಲಿ ತೆರಳುತ್ತಿದ್ದ ವೇಳೆ ಮತ್ತೊಂದು ಬೈಕ್‌ ಜತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡೂ ಬೈಕ್‌ಗಳು ಉರುಳಿ ಬಿದ್ದಿವೆ. ಆದರೆ, ರಾಕೇಶ್‌ಗೆ ತೀವ್ರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಮತ್ತೋರ್ವ ಬೈಕ್ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ರಾಕೇಶ್‌

ಇದನ್ನೂ ಓದಿ : Murder Case: ಮಗನಿಗೇ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ತಾಯಿ!

Exit mobile version