Site icon Vistara News

Road Accident: ಬೈಕ್‌ಗೆ ಕಾರು ಡಿಕ್ಕಿ; ತುಂಡಾದ ಬೈಕ್ ಸವಾರನ ಪಾದ!

car collided with a bike Bike rider foot severed

ಕಾರಟಗಿ: ರಸ್ತೆ ಬದಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ (Car Collided) ಹೊಡೆದ ಪರಿಣಾಮ ಬೈಕ್ ಸವಾರನ (Bike Rider) ಎಡಗಾಲಿನ ಪಾದ ತುಂಡಾದ ಘಟನೆ ತಾಲೂಕಿನ ಸಿದ್ದಾಪುರ ಸಮೀಪದ ಗುಂಡೂರು ಕ್ರಾಸ್ ಬಳಿ ಮಂಗಳವಾರ ನಡೆದಿದೆ.

ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಸಿದ್ಧಲಿಂಗಪ್ಪ (39) ಹಾಗೂ ಆತನ ಮಗ ಹರೀಶ್ (13) ಎಂಬ ಇಬ್ಬರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ. ರಜೆ ಹಿನ್ನಲೆಯಲ್ಲಿ ಬೆನ್ನೂರು ಗ್ರಾಮಕ್ಕೆ ಬಂದಿದ್ದು, ಮಂಗಳವಾರ ಎಂದಿನಂತೆ ಶಾಲೆ ಆರಂಭದ ಹಿನ್ನಲೆಯಲ್ಲಿ ತಮ್ಮ ಮಗನನ್ನು ಬಿಟ್ಟು ಬರಲು ಬೈಕ್ ಮೂಲಕ ತೆರಳುತ್ತಿರುವಾಗ ಗುಂಡೂರು ಕ್ರಾಸ್‌ನ ರಸ್ತೆ ಬಳಿ ಬೈಕ್ ನಿಲ್ಲಿಸಿದ್ದರು.

ಈ ವೇಳೆ ಗಂಗಾವತಿಯಿಂದ ಸಿಂಧನೂರು ಕಡೆಗೆ ಹೊರಟಿದ್ದ ಕಾರೊಂದು ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version