Site icon Vistara News

Road accident | ರಸ್ತೆ ಅವ್ಯವಸ್ಥೆ: ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಬೈಕ್‌, ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು

ದೇವನಹಳ್ಳಿ ಅಪಘಾತ

ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ಶೆಟ್ಟರಹಳ್ಳಿ ಗೇಟ್ ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road accident) ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಎದುರಿನಿಂದ ಬಂದ ಕ್ಯಾಂಟರ್‌ಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಸಾವು ಸಂಭವಿಸಿದೆ.

ದೇವನಹಳ್ಳಿ ಮೂಲದ ರಾಕೇಶ್ ( 22 )ಮತ್ತು ಪ್ರತಾಪ್ ( 28 )ಮೃತ ಬೈಕ್ ಸವಾರರು. ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಕ್ಯಾಂಟರ್‌ ಧಾವಿಸಿ ಬರುತ್ತಿತ್ತು. ಬೈಕ್‌ ನೇರವಾಗಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅರ್ಧ ಬೈಕ್‌ ಕ್ಯಾಂಟರ್‌ ಒಳಗೆ ನುಗ್ಗಿದೆ.

ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕಾರಣ
ಹೆದ್ದಾರಿ‌ ಕಾಮಗಾರಿ‌ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ. ಇಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿ ಬಳಿ ರಸ್ತೆ ವಿಭಜಕದ‌ ಸೂಕ್ತ ಸೂಚನಾ ಫಲಕ ಅಳವಡಿಸದ ಹಿನ್ನೆಲೆಯಲ್ಲಿ ಒಂದೇ ರಸ್ತೆಯಲ್ಲಿ ಕ್ಯಾಂಟರ್ ಮತ್ತು ಬೈಕ್ ಆಗಮಿಸಿತ್ತು. ದಿಲೀಪ್ ಬಿಲ್ಡ್ ಕನ್‌ಸ್ಟ್ರಕ್ಷನ್‌ನಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ.

ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | BBMP lorry | ಬಿಬಿಎಂಪಿ ಕಸದ ಲಾರಿ ಧಾವಂತಕ್ಕೆ ಬೈಕ್‌ ಸವಾರರಿಬ್ಬರು ಬಲಿ; ಇನ್ನೊಂದು ಲಾರಿಯಡಿಗೆ ಬಿದ್ದು ಪಾದಚಾರಿ ಸಾವು

Exit mobile version