Site icon Vistara News

Road Accident : ನಿಂತಿದ್ದ ಟ್ಯಾಂಕರ್‌ಗೆ ಬೈಕ್‌ ಡಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲೇ ಸಾವು

Accdient death

ನೆಲಮಂಗಲ: ಬೈಕೊಂದು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು (Bike hits Tanker) ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ (Two riders dead) ಘಟನೆ ನೆಲಮಂಗಲ (Road Accident) ಸಮೀಪ ನಡೆದಿದೆ. ಶ್ರೀನಿವಾಸಪುರ ಮತ್ತು ಮತ್ತಳ್ಳಿ ಗ್ರಾಮದ ಯುವಕರಾದ ಪ್ರಕಾಶ್‌ (30) ಮತ್ತು ವಿನೋದ್‌ (32) ಮೃತಪಟ್ಟವರು.

ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ಕಡೆಯಿಂದ ನೆಲಮಂಗಲಕ್ಕೆ (Accident near Nelamangala) ಬರುವಾಗ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ಘಟನೆ ನಡೆದಿದೆ. ಅವರು ಹೆದ್ದಾರಿಯಲ್ಲಿ ಬರುತ್ತಿದ್ದಾಗ ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಡಿದು ಹೊಲದಲ್ಲೇ ಮೃತಪಟ್ಟ ಎತ್ತು

ಮಂಡ್ಯ: ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಎತ್ತೊಂದು ಹಾವು ಕಡಿದು ಹೊಲದಲ್ಲೇ ಪ್ರಾಣ ಕಳೆದುಕೊಂಡಿದೆ. ಗ್ರಾಮದ ರೈತ ಮಹಿಳೆ ಗೌರಮ್ಮ ಎಂಬುವವರಿಗೆ ಸೇರಿದ ಎತ್ತು ಇದಾಗಿದ್ದು, ಜಮೀನಿನ ಬಳಿ ಕೆಲಸ ಮಾಡುವ ವೇಳೆ ಹಾವು ಕಚ್ಚಿತ್ತು. ಹಾವು ಕಚ್ಚಿದ ಕೂಡಲೇ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ.

Thief arrested in Koppala

ಕಣ್ಣೆದುರೇ ಎತ್ತು ಪ್ರಾಣ ಕಳೆದುಕೊಂಡಿರುವುದನ್ನು ನೋಡಿ ರೈತ ಮಹಿಳೆಯ ಗೋಳಾಟ ಮುಗಿಲು ಮುಟ್ಟಿತು. ಎತ್ತು ಕಳೆದುಕೊಂಡ ರೈತ ಮಹಿಳೆ ಪರಿಹಾರಕ್ಕಾಗಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಕಳ್ಳತನಕ್ಕೆ ಬಂದಿದ್ದ ಕಳ್ಳನನ್ನು ಹಿಡಿದ ಗ್ರಾಮಸ್ಥರು

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಕಳ್ಳತನಕ್ಕೆ ಬಂದಿದ್ದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ನಡುವೆ ಚೆನ್ನಾಗಿ ಬಾರಿಸಿದ್ದಾರೆ ಕೂಡಾ.

Thief arrested in Koppala

ಭಾನುವಾರ ರಾತ್ರಿ ಹೂಲಗೇರಿಯ ಶರಣಪ್ಪ ನಾಗರಾಳ ಎಂಬುವವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದಾಗ ಈ ಕಳ್ಳ ಸಿಕ್ಕಿಬಿದ್ದಿದ್ದಾನೆ. ಮನೆಯವರು ಮೇಲಂತಸ್ತಿನ ಮನೆಯಲ್ಲಿ ಮಲಗಿದ್ದಾಗ ಈತ ಒಳನುಗ್ಗಿದ್ದ. ಈ ನಡುವೆ ಮನೆಯವರಿಗೆ ಕಳ್ಳನೊಬ್ಬ ಒಳನುಗ್ಗಿದ್ದು ಹೇಗೋ ಗೊತ್ತಾಗಿತ್ತು. ಅವರು ಕೂಡಲೇ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿ ಮನೆಯ ಹೊರಗೆ ಸಾಕಷ್ಟು ಜನ ಸೇರಿದ್ದರು.

ಆದರೆ, ಇದರ ಅರಿವು ಇಲ್ಲದ ಕಳ್ಳ ಮನೆಯೊಳಗೆ ಆರಾಮವಾಗಿ ತಿರುಗಾಡಿ, ಕೈಗೆ ಸಿಕ್ಕಿದ್ದನ್ನು ಕದ್ದು ಹೊರಗೆ ಬರುತ್ತಿದ್ದಂತೆಯೇ ಅವನಿಗೆ ದೊಡ್ಡ ಅಚ್ಚರಿ ಕಾದಿತ್ತು. ಹೊರಗೆ ಹತ್ತಾರು ಮಂದಿ ಸೇರಿದ್ದರು. ಅವರನ್ನು ನೋಡಿ ಓಡಿ ಹೋಗಲು ಯತ್ನಿಸಿದ. ಆಗ ಅವರೆಲ್ಲರೂ ಸೇರಿ ಅವನನ್ನು ಹಿಡಿದು ಚೆನ್ನಾಗಿ ಥಳಿಸಿದರು.

ಸಿಕ್ಕಿಬಿದ್ದ ಕಳ್ಳನನ್ನು ಇಂಡಿ ಮೂಲದವನು ಎಂಬ ಮಾಹಿತಿ ಇದೆ. ಸಾರ್ವಜನಿಕರು ಆತನನ್ನು ಹನುಮಸಾಗರ ಪೊಲೀಸರಿಗೆ ಒಪ್ಪಿಸಿದರು.

ಇದನ್ನೂ ಓದಿ: Student death : ಅಮ್ಮಾ ಬಕೆಟ್‌ ಇದ್ಯಾ? ಎಂದು ಬಾಲ್ಕನಿಯಿಂದ ಬಾಗಿ ಕೇಳಿದ ಮೆಡಿಕಲ್‌ ವಿದ್ಯಾರ್ಥಿ ಕೆಳಗೆ ಬಿದ್ದು ಸಾವು

Exit mobile version