Site icon Vistara News

Road Accident: ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Road Accident

ಹಾಸನ: ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವುದು (Road Accident) ತಾಲೂಕಿನ ಶಾಂತಿಗ್ರಾಮ ಟೋಲ್ ಗೇಟ್‌ ಬಳಿ ನಡೆದಿದೆ. ರಸ್ತೆ ಬದಿ ಟ್ರಕ್ ನಿಲ್ಲಿಸಿಕೊಂಡು ಚಾಲಕ ಹಾಗೂ ನಿರ್ವಾಹಕ ಅಡುಗೆ ಮಾಡುತ್ತಿದ್ದಾಗ, ಹಿಂಭಾಗದಿಂದ ವೇಗವಾಗಿ ಬಂದ ಬೈಕ್‌ ಟ್ರಕ್‌ಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ಅರಕಲಗೂಡು ತಾಲೂಕಿನ ಚಿಕ್ಕ ಆಲದಹಳ್ಳಿ ಅಶ್ವತ್ಥ್(42), ಆಲದಹಳ್ಳಿ ಗ್ರಾಮದ ಸಾಗರ್ (ಸಾಗರ್‌) ಮೃತ ದುರ್ದೈವಿಗಳು. ಚನ್ನರಾಯಪಟ್ಟಣದ ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಬೈಕ್ ಸವಾರರು, ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಾಸನದ ಕ್ಯಾಸ್ಟ್ರಲ್ ಆಯಿಲ್‌ ಕಂಪನಿಯಲ್ಲಿ ಮೃತ ಅಶ್ವತ್ಥ್‌ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Shivamogga News: ಸಾಗರದಲ್ಲಿ ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು

ಬೆಂಗಳೂರು-ಕಡಪ ರಸ್ತೆಯಲ್ಲಿ ಕಾರು-ಬೈಕ್‌ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

ಕೋಲಾರ: ಕಾರು ಮತ್ತು ಬೈಕ್‌ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಕಮತಂಪಲ್ಲಿ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.

ಶ್ರೀನಿವಾಸಪುರ ತಾಲೂಕಿನ ಬೈರಗಾನಪಲ್ಲಿಯ ಗೋಪಾಲಪ್ಪ(58), ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದ ವೆಂಕಟೇಶ್ (45) ಮೃತರು. ಇವರಿಬ್ಬರೂ ಬಾವ-ಬಾಮೈದ ಆಗಿದ್ದು, ಬೆಂಗಳೂರು-ಕಡಪ ರಸ್ತೆಯ ತಾಡಿಗೋಲ್ ಕ್ರಾಸ್ ಸಮೀಪದ ಕಮತಂಪಲ್ಲಿ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ.

ಅಪಘಾತ ನಡೆದ ವೇಳೆ ರಸ್ತೆಯಿಂದ ಸುಮಾರು 15 ಅಡಿಗಳ ಆಳಕ್ಕೆ ಕಾರು ಹಾಗೂ ದ್ವಿಚಕ್ರವಾಹನ ಸಮೇತ ಸವಾರರು ಬಿದ್ದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಬಾವ-ಬಾಮೈದ ಸ್ಥಳದಲ್ಲಿಯೇ ಮೃತಪಟಿದ್ದಾರೆ.

ಇದನ್ನೂ ಓದಿ | Misbehaviour : ಮಹಿಳೆಯರನ್ನು ಚುಡಾಯಿಸಿದ ಕಾಮುಕನ ಹಿಗ್ಗಾಮುಗ್ಗಾ ಥಳಿಸಿದ ಜನರು

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ; ಸವಾರ ಸಾವು

ಕಾರವಾರ: ಕಾರು-ಬೈಕ್ ಭೀಕರ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹನುಮಂತಿ ಕ್ರಾಸ್ ಬಳಿ ನಡೆದಿದೆ.ಶ್ಯಾಮಸುಂದರ ಹೆಗಡೆ(58) ಮೃತ ದುರ್ದೈವಿ. ಕಾರು ಬಡಿದು ರಸ್ತೆ ಪಕ್ಕದ ಹೋರ್ಡಿಂಗ್ಸ್ ಮುರಿದುಬಿದ್ದಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಅಪಘಾತ ನಡೆದಿದೆ.

Exit mobile version