Site icon Vistara News

Road Accident: ಹೆಮ್ಮಾಡಿ ಬಳಿ ಬಸ್‌ನಿಂದ ಕೆಳಗೆ ಬಿದ್ದ ಯುವಕ; ಸೊಂಟದ ಮೇಲೆ ಚಕ್ರ ಹರಿದು ಸಾವು

accident sudeep in udupi

accident sudeep in udupi

ಉಡುಪಿ: ಕುಂದಾಪುರ ಸಮೀಪದ ಹೆಮ್ಮಾಡಿ ಬಳಿ ಬಸ್‌ ಚಲಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಯುವಕನೊಬ್ಬ ಚಕ್ರದಡಿ ಸಿಲುಕಿ (Road Accident) ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿ ಸುದೀಪ್ (20) ಮೃತಪಟ್ಟವರು. ಸುದೀಪ್ ಕೋಟೇಶ್ವರ ಕಾಗೇರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದರು. ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: Basavaraj Bommai Birthday: ಸಿಎಂ ಬಸವರಾಜ ಬೊಮ್ಮಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ

ಬಸ್ ರಶ್ ಇದ್ದ ಕಾರಣ ಫುಟ್‌ಬೋರ್ಡ್‌ ಮೇಲೆ ನಿಂತು ಸುದೀಪ್ ಪ್ರಯಾಣಿಸುತ್ತಿದ್ದ. ಈ ವೇಳೆ ಬಸ್‌ ವೇಗವಾಗಿತ್ತು ಎನ್ನಲಾಗಿದೆ. ಈ ವೇಳೆ ಮಹಿಳೆಯೊಬ್ಬರನ್ನು ಇಳಿಸುವ ಸಂಬಂಧ ಹಠಾತ್ ಆಗಿ ಬ್ರೇಕ್‌ ಬಸ್ ಅನ್ನು ಹಾಕಿ ನಿಲ್ಲಿಸಲು ಮುಂದಾಗಲಾಗಿದೆ. ಆಗ ಸುದೀಪ್‌ ಆಯತಪ್ಪಿ ಬಿದ್ದಿದ್ದು, ಬಸ್ ಚಕ್ರದಡಿ ಸಿಲುಕಿದ್ದಾರೆ. ಈ ವೇಳೆ ಚಾಲಕನಿಗೆ ತಿಳಿಯದೇ ಸುದೀಪ್‌ ಮೇಲೆ ಬಸ್‌ ಹರಿದಿದೆ. ಸೊಂಟದ ಮೇಲೆ ಬಸ್ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Exit mobile version