Site icon Vistara News

Robbery Case: ಸಾರಿಗೆ ಬಸ್‌ನಲ್ಲಿ ಚಾಕು ತೋರಿಸಿ ಹಣ ದರೋಡೆ ಮಾಡಿದ್ದ ಎಂಟು ಆರೋಪಿಗಳ ಬಂಧನ

Robbery Case

ಹಾವೇರಿ: ಸಾರಿಗೆ ಬಸ್‌ನಲ್ಲಿ ಚಾಲಕನಿಗೆ ಚಾಕು ತೋರಿಸಿ, ಪ್ರಯಾಣಿಕನ ಹಣ ದರೋಡೆ (Robbery Case) ಮಾಡಿದ್ದ 8 ದರೋಡೆಕೋರರನ್ನು ಬಂಕಾಪುರ ಪೊಲೀಸರು ಬಂಧಿಸಿ, ಎರಡು ಮೋಟಾರ್‌ ಸೈಕಲ್, 12 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ 15 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸ ವೀರಾಪುರ (25), ಅರ್ಜುನ್ ಬುಗಡಿ (26), ಧನರಾಜ ಚಂದಾವರಿ (30), ಪವನ ಗಬ್ಬೂರ (22), ಶ್ರೀನಿವಾಸ ಕಟಾರಿ (31), ಸಿದ್ದಾರ್ಥ ಅಥಣಿ (24) ಹಾಗೂ ರಾಮಕೃಷ್ಣ ಬಾಕಳೆ (47) ಬಂಧಿತರು.

ಜನವರಿ 18ರಂದು ಹುಬ್ಬಳ್ಳಿ ಮೂಲದ ಸ್ಟೀಲ್ ಮೆಟಲ್ ವ್ಯಾಪಾರಿ ರಾಕೇಶ ಚೌಧರಿಗೆ, ಆರೋಪಿಗಳು ಚಾಕು ತೋರಿಸಿ, ೬೦ ಸಾವಿರ ನಗದು, ಒಂದು ಮೊಬೈಲ್ ಅನ್ನು ದೋಚಿದ್ದರು. ಈ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಗ್ಗಾಂವಿಯ ಠಾಣೆಯ ಸಿಪಿಐ ಬಸವರಾಜ್ ಹಳಬನ್ನವರ್, ಬಂಕಾಪುರ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಕಟ್ಟಿಮನಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ದರೋಡೆಕೋರರ ತಂಡವನ್ನು ಸೆರೆಹಿಡಿದಿದ್ದಾರೆ.

ಇದನ್ನೂ ಓದಿ | Road accident : ಯುವಕರ ರ‍್ಯಾಶ್‌ ಡ್ರೈವಿಂಗ್‌ ಕ್ರೇಜ್‌; ಬೈಕ್‌ ಡಿವೈಡರ್‌ಗೆ ಬಡಿದು ಇಬ್ಬರಿಗೆ ಗಂಭೀರ ಗಾಯ

Exit mobile version