Site icon Vistara News

Assault Case: ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಿದ ರೌಡಿಶೀಟರ್

Injured Afroz

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ರೌಡಿಶೀಟರ್‌ವೊಬ್ಬ ಕುಡಿದ ಮತ್ತಿನಲ್ಲಿ ತಲ್ವಾರ್‌ ಹಿಡಿದು ರಸ್ತೆಯಲ್ಲಿ ದಾಂಧಲೆ ನಡೆಸಿದ್ದು, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪದ ಆಭರಣ ಅಂಗಡಿ ಬಳಿ ಮಂಗಳವಾರ ರಾತ್ರಿ ಘಟನೆ (Assault Case) ನಡೆದಿದೆ.

ಇದನ್ನೂ ಓದಿ | Hunting Animals : ಕಾಡು ಪ್ರಾಣಿಗಳನ್ನು ಬೇಟೆಯಾಡಿ ಖಾದ್ಯ ತಯಾರಿ ವೇಳೆ ದಾಳಿ; ಮೂವರು ಎಸ್ಕೇಪ್‌, ಮಾಂಸ ವಶಕ್ಕೆ

ರೌಡಿಶೀಟರ್ ಚೋರ್ ಸಮೀರ್ ಹಲ್ಲೆ ಮಾಡಿದವ. ಜೀವಿತ್, ಅಫ್ರೋಜ್ ಗಾಯಾಳುಗಳು. ಮೊದಲಿಗೆ ನಾಲ್ವರು ಮದ್ಯ ಸೇವಿಸಿ ರಸ್ತೆಯಲ್ಲಿ ಹೊಡೆದಾಡಿದ್ದಾರೆ. ಈ ವೇಳೆ ರೌಡಿ ಶೀಟರ್ ಸಮೀರ್‌ ಕುಡಿದ ಮತ್ತಿನಲ್ಲಿ ತಲ್ವಾರ್‌ ಬೀಸಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಗಲಾಟೆ ಬಳಿಕ ಆರೋಪಿ ಸಮೀರ್ ಪರಾರಿಯಾಗಿದ್ದಾನೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version