Site icon Vistara News

Security murder | ವಸತಿ ಬಡಾವಣೆಯಲ್ಲಿ ಕಳವು ಯತ್ನ: ತಡೆಯಲು ಬಂದ ಸೆಕ್ಯುರಿಟಿ ಗಾರ್ಡ್‌ ಬರ್ಬರ ಕೊಲೆ

murder in jigani

ಆನೇಕಲ್: ವಸತಿ ಬಡಾವಣೆಯಲ್ಲಿ ಕಳವು ಮಾಡಲು ಯತ್ನಿಸಿದ್ದನ್ನು ತಡೆದ ಸೆಕ್ಯುರಿಟಿ ಗಾರ್ಡ್‌ ಅವರನ್ನು ರಾಡ್‌ನಿಂದ ಹೊಡೆದು ಕೊಲ್ಲಲಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಶ್ರೀರಾಮಪುರ ಬಳಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ, ಅಸ್ಸಾಂ ಮೂಲದ ಮಕ್ಬೂಲ್ ಅಲಿ(45) ಅವರನ್ನು ಕೊಲೆ (security murder) ಮಾಡಲಾಗಿದ್ದರೆ, ಇನ್ನೊಬ್ಬ ಸೆಕ್ಯುರಿಟಿ ಸಹಾಯಕ ರಶೀದುಲ್ ಇಸ್ಲಾಂ ಮೇಲೂ ಹಲ್ಲೆಯಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಕ್ಬೂಲ್‌ ಅಲಿ

ಶ್ರೀರಾಮಪುರದಲ್ಲಿ ಐಡಿಯಲ್ ಹೋಮ್ಸ್ ಎಂಬ ವಸತಿ ಬಡಾವಣೆ ಇದ್ದು, ಇಲ್ಲಿ ಹಲವು ಮನೆಗಳು ನಿರ್ಮಾಣವಾಗಿದ್ದು, ಇನ್ನಷ್ಟು ಮನೆಗಳು ನಿರ್ಮಾಣ ಹಂತದಲ್ಲಿವೆ. ಇಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಸಾಮಗ್ರಿ, ಸಲಕರಣೆಗಳನ್ನು ರಾಶಿ ಹಾಕಲಾಗಿದೆ. ಇದರ ಮೇಲೆ ಕಣ್ಣಿಟ್ಟಿದ್ದ ದುಷ್ಕರ್ಮಿಗಳು ಗುರುವಾರ ರಾತ್ರಿ ಬಡಾವಣೆಯ ಒಳಗೆ ನುಗ್ಗಿದ್ದರು.

ಅವರು ಕೆಲವು ಸಾಮಗ್ರಿಗಳನ್ನು ಕಳವು ಮಾಡಿ ಒಯ್ಯಲು ಪ್ರಯತ್ನಿಸಿದಾಗ ಅಲ್ಲಿ ಸಸೆಕ್ಯೂರಿಟಿ ಗಾರ್ಡ್‌ ಆಗಿರುವ ಮಕ್ಬೂಲ್ ಅಲಿ ತಡೆದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಲಾಗಿದೆ. ಜತೆಗೆ ಸೆಲ್ಲೊ ಟೇಪ್ ನಿಂದ ಕೈ ಕಾಲು ಕಟ್ಟಿ ಕೊಲೆ ಮಾಡಲಾಗಿದೆ.

ಆರೇಳು ಮಂದಿ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಸ್ಥಳೀಯ ಸಿಸಿ ಟಿವಿಗಳ ಪರಿಶೀಲನೆಯಿಂದ ಕೊಲೆಗಾರರಾದ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚುವ ವಿಶ್ವಾಸವಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | murder | ಕುರಿ ಮೇಯಿಸಲು ಹೋದ ಮಹಿಳೆ ಕೊಲೆ, ಬಾಯಿಗೆ ಸೀರೆ ತುರುಕಿ, ಉಸಿರುಗಟ್ಟಿಸಿ ಕೊಂದ ದುಷ್ಟರು

Exit mobile version