Site icon Vistara News

Sexual assault | ಶಾಲಾ ಬಸ್‌ನಲ್ಲೇ ಮಹಿಳೆಯ ಅತ್ಯಾಚಾರ: ಡ್ರಾಪ್‌ ಕೊಡುವ ನೆಪದಲ್ಲಿ ಕರೆದೊಯ್ದು ಕಿರಾತಕ ಕೃತ್ಯ

Rape Sexual Harassment Banglore electronic city rape case

ಬೆಂಗಳೂರು: ಅವನು ಪುಟಾಣಿ ಮಕ್ಕಳನ್ನು ಶಾಲೆಗೆ ಕರೆದೊಯ್ದು ಮನೆಗೆ ಮರಳಿಸುವ ಅತ್ಯಂತ ಸಂಯಮ ಬೇಡುವ ಮತ್ತು ಅತ್ಯಂತ ಸಭ್ಯರು ಮಾಡಬಹುದಾದ ಕೆಲಸ. ಅಂಥ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅದೇ ಸ್ಕೂಲ್‌ ಬಸ್‌ನ್ನು ಬಳಸಿಕೊಂಡು ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಂಗಳವಾರ ಸಂಜೆ ಬೆಂಗೂರಿನ ನಾಯಂಡಹಳ್ಳಿ ಪರಿಸರದಲ್ಲಿ ಈ ಘಟನೆ ನಡೆದಿದೆ. ಈ ರೀತಿ ಶಾಲಾ ಬಸ್ಸನ್ನೇ ತನ್ನ ಕಿರಾತಕ ಕೃತ್ಯಕ್ಕೆ ಬಳಸಿಕೊಂಡ ದುಷ್ಕರ್ಮಿಯನ್ನು ಶಿವಕುಮಾರ್‌ ಅಲಿಯಾಸ್‌ ಶಿವ ಎಂದು ಗುರುತಿಸಲಾಗಿದೆ.

ಹೇಗೆ ನಡೆಯಿತು ಈ ಕಿರಾತಕ ಕೃತ್ಯ?
ಶಿವಕುಮಾರ್‌ ಅಲಿಯಾಸ್‌ ಶಿವ ಶಾಲಾ ಬಸ್‌ನಲ್ಲಿ ಮಕ್ಕಳನ್ನು ಬಿಟ್ಟು ಮರಳಿ ಶಾಲೆಯ ಕಡೆಗೆ ಹೊರಟಿದ್ದ. ಬಸ್ಸಿನಲ್ಲಿ ಮಕ್ಕಳೂ ಇರಲಿಲ್ಲ. ನಿರ್ವಾಹಕ, ಆಯಾ ಯಾರೂ ಇರಲಿಲ್ಲ. ಈ ನಡುವೆ ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ಹೋಗಲೆಂದು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಮಹಿಳೆಯ ಎದುರು ಬಸ್‌ ನಿಲ್ಲಿಸಿದ ಶಿವಕುಮಾರ್‌ ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ. ಮಹಿಳೆ ತನಗೆ ಲಗ್ಗೆರೆಗೆ ಹೋಗಬೇಕು ಎಂದಿದ್ದಾರೆ.

ಹಾಗಿದ್ದರೆ ತಾನೂ ಅದೇ ರೂಟ್‌ನಲ್ಲಿ ಹೋಗುವುದಾಗಿ ಹೇಳಿದ ಶಿವಕುಮಾರ್‌ ಡ್ರಾಪ್‌ ಕೊಡುವುದಾಗಿ ಹೇಳಿದ್ದಾರೆ. ಬೇಗನೆ ಮನೆ ಸೇರುವ ತವಕ ಮತ್ತು ಸ್ಕೂಲ್‌ ಬಸ್‌ ಎಂಬ ನಂಬಿಕೆಯಲ್ಲಿ ಮಹಿಳೆ ಬಸ್‌ ಹತ್ತಿದ್ದಾರೆ. ಈ ನಡುವೆ ಮಹಿಳೆಯನ್ನು ಬಸ್‌ ಹತ್ತಿಸಿಕೊಂಡ ಶಿವಕುಮಾರ್‌ ಬಳಿಕ ಎಲ್ಲ ಗ್ಲಾಸ್‌ ಕ್ಲೋಸ್‌ ಮಾಡಲು ಶುರು ಮಾಡಿದ್ದ. ಮಹಿಳೆ ʻಯಾಕಪ್ಪಾ ಗ್ಲಾಸ್‌ ಕ್ಲೋಸ್‌ ಮಾಡುತ್ತಿದ್ದೀಯಾʼ ಎಂದು ಕೇಳಿದ್ದಾರೆ. ಆಗ ಚಾಲಕ, ಮುಂದೆ ಟ್ರಾಫಿಕ್‌ ಪೊಲೀಸ್‌ ಇರ್ತಾರೆ. ನಾವು ಪ್ಯಾಸೆಂಜರ್ಸ್‌ ಹಾಕಬಾರದು. ಅದಕ್ಕಾಗಿ ಗ್ಲಾಸ್‌ ಏರಿಸಿದೆ ಎಂದಿದ್ದಾನೆ. ಜತೆಗೆ ಮುಂದೆ ಇನ್ನೂ ಕೆಲವರು ಬಸ್‌ ಹತ್ತಲಿದ್ದಾರೆ ಎಂದು ನಂಬಿಸಿದ್ದ.

ಈ ನಡುವೆ ನಾಯಂಡಹಳ್ಳಿಯಿಂದ ಹೊರಟ ಬಸ್‌ ನಾಗರಬಾವಿ ಏಕಾಏಕಿ ಬಳಿ ಮಾರ್ಗ ಬದಲಿಸಿದ್ದ ಚಾಲಕ. ಅಲ್ಲಿಂದ ʻನಮ್ಮೂರು ತಿಂಡಿʼ ಮಾರ್ಗವಾಗಿ ಮಾಳಗಾಳದ ಕಡೆ ಹೋಗಿದ್ದ ಆತ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಹೋಗಿ ಸ್ಕೂಲ್ ಬಸ್ ನಿಲ್ಲಿಸಿದ್ದ!

ನಾನು ಲಗ್ಗೆರೆಗೆ ಹೋಗುವವಳು, ಇಲ್ಲಿಗೆ ಯಾಕೆ ಕರೆ ತಂದೆ ಎಂದು ಪ್ರಶ್ನಿಸಿದಾಗ ಶಿವಕುಮಾರ್‌ ಮಹಿಳೆಯ ಮೇಲೆ ಕಬ್ಬಿಣದ ರಾಡ್‌ ಮತ್ತು ಸ್ಪ್ಯಾನರ್‌ನಿಂದ ಹಲ್ಲೆ ಮಾಡಿದ್ದ. ಮಹಿಳೆಯನ್ನು ಬಸ್ ಒಳಗೆ ಕೆಡವಿ ಕೈಗಳನ್ನು ಕಾಲಿನಿಂದ ಮೆಟ್ಟಿ ಹಲ್ಲೆ ಮಾಡಿದ್ದ. ಮಹಿಳೆಯ ಕಾಪಾಡುವತೆ ಕಿರುಚಾಡಿದ್ದಕ್ಕೆ ಚಾಕು ತೆಗೆದಿದ್ದ ಕಿರಾತಕ ಕುತ್ತಿಗೆಯ ಬಳಿಕ ಇಟ್ಟು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆತನಿಂದ ತಪ್ಪಿಸಿಕೊಂಡು ಓಡಿ ಹೋಗಲು ಬಸ್‌ನ ಬಾಗಿಲಿನ ಬಳಿಕ ಬಂದ ಮಹಿಳೆಗೆ ಇನ್ನಷ್ಟು ಹಲ್ಲೆ ಮಾಡಿದ್ದಾನೆ. ಬಳಿಕ ಒಂದು ಕೋರೆ ಹಲ್ಲು ಮುರಿಯವ ಹಾಗೆ ಪಂಚ್ ಮಾಡಿರುವ ಆತ ಮಹಿಳೆಯ ಸಂತ್ರಸ್ತೆಯದೇ ವೇಲ್‌ ಬಳಸಿ ಕೈಗಳನ್ನು ಕಟ್ಟಿ ಹಾಕಿ ಆರೋಪಿ ಅತ್ಯಾಚಾರ ಮಾಡಿದ್ದಾನೆ.

ಕಿರುಚಾಡಿದ್ರೆ ಹತ್ಯೆ ಮಾಡುವುದಾಗಿ ಕುತ್ತಿಗೆಗೆ ಚೂರಿ ಇಟ್ಟೇ ಕಾಮುಕ ಅತ್ಯಾಚಾರ ಮಾಡಿದ್ದಾನೆ. ಘಟನೆಯ ಬಳಿಕ ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಕರೆ ಮಾಡಿದ್ದಾರೆ. ಇದೀಗ ಸದ್ಯ ಚಂದ್ರಾ ಲೇಔಟ್‌ನಲ್ಲಿ ದೂರು ದಾಖಲಿಸಿದರು. ಇದೀಗ ಆರೋಪಿ ಶಿವಕುಮಾರ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Exit mobile version