Site icon Vistara News

ಶಿವಮೊಗ್ಗ ಸುಬ್ಬಣ್ಣ | ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ವ್ಯವಸ್ಥೆ

shivamogga subbanna

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟಿರುವ ನಾಡಿನ ಹಿರಿಯ ಸುಗಮ ಸಂಗೀತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನಲ್ಲಿ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ಹೇಳಿದ್ದಾರೆ.

ಸಂಜೆ ಹೃದಯಾಘಾತ : ಸುಬ್ಬಣ್ಣ ಅವರಿಗೆ ಗುರುವಾರ ಸಂಜೆ ಐದು ಗಂಟೆ ವೇಳೆಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಹೀಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಂತರ ಅಲ್ಲಿಂದ ಜಯದೇವಕ್ಕೆ ಹೋದೆವು. ಅಷ್ಟರಲ್ಲಿ ಅವರಿಗೆ ಹೃದಯಘಾತವಾಗಿತ್ತು ಎಂದು ತಿಳಿದುಬಂತು. ನಾಳೆ ಅವರ ಅಂತ್ಯಕ್ರಿಯೆ ಮಾಡಲಿದ್ದೇವೆ ಎಂದು ಶ್ರೀರಂಗ ತಿಳಿಸಿದ್ದಾರೆ.

ಇದನ್ನೂ ಓದಿ: ಗಾನ ನಮನ| ಬಾರಿಸು ಕನ್ನಡ ಡಿಂಡಿಮವಾ.. ಶಿವಮೊಗ್ಗ ಸುಬ್ಬಣ್ಣ ಸಿರಿಕಂಠದ ಟಾಪ್‌ 10 ಭಾವಗೀತೆಗಳು

Exit mobile version