Site icon Vistara News

ಶಿವಮೊಗ್ಗ ಸುಬ್ಬಣ್ಣ | ಕಳಚಿಬಿತ್ತು ಸುಗಮ ಸಂಗೀತದ ಕೊನೆಯ ಪಿಲ್ಲರ್:‌ ಅರ್ಚನಾ ಉಡುಪ ಬೇಸರ

subbanna2

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರದಲ್ಲಿ ಕಾಳಿಂಗರಾಯರು, ಬಾಳಪ್ಪ ಹುಕ್ಕೇರಿಯವರು, ಮೈಸೂರು ಅನಂತಸ್ವಾಮಿಯವರು, ಅಶ್ವಥ್ ಮತ್ತು ಸುಬ್ಬಣ್ಣನವರು ಐದು ಐದು ಪಿಲ್ಲರ್ ಇದ್ದ ಹಾಗೆ ಇದ್ದರು. ಅದರಲ್ಲಿ ಕೊನೆಯ ಪಿಲ್ಲರ್ ಕಳಚಿ ಬಿದ್ದಿದೆ. ಇದು ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಖ್ಯಾತ ಗಾಯಕಿ, ಶಿವಮೊಗ್ಗ ಸುಬ್ಬಣ್ಣ ಅವರ ಸೊಸೆ ಅರ್ಚನಾ ಉಡುಪ ಹೇಳಿದ್ದಾರೆ.

ನಾನು ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿ ಬಂದಾಗ ಅವರನ್ನು ಮಾವ ಅಂತ ಕರೆದಿದ್ದೆ. ಆಗ ಅವರು ನನಗೆ ಬೈದು, ʼಮಾವ ಅಂತ ಕರೆಯಬೇಡ‌, ಡ್ಯಾಡಿ ಅಂತ ಕರೆಯಬೇಕುʼ ಅಂದಿದ್ದರು. ಯಾವಾಗಲೂ ಪ್ರೀತಿಯಿಂದ ಬೈಯುತ್ತಿದ್ದರು, ಗಾಯನದ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಅರ್ಚನಾ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಸುಬ್ಬಣ್ಣ | ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ವ್ಯವಸ್ಥೆ

Exit mobile version