Site icon Vistara News

Shimogga tense | ಶಿವಮೊಗ್ಗ ಪ್ರಕರಣದ ಎಫೆಕ್ಟ್‌ ಬೆಂಗಳೂರಿಗೆ ತಟ್ಟದಂತೆ ಕಟ್ಟೆಚ್ಚರ

kalige gundu

ಬೆಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಸಂಬಂಧ ಹುಟ್ಟಿಕೊಂಡ ವಿವಾದ ಬಳಿಕ ನಡೆದ ಚೂರಿ ಇರಿತ, ಉದ್ವಿಗ್ನತೆಯ ಎಫೆಕ್ಟ್‌ ಬೆಂಗಳೂರಿಗೆ ತಟ್ಟದಂತೆ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೆಲವು ದಿನಗಳ ಹಿಂದೆ ಶಿಕಾರಿಪುರದ ಶಿವಪ್ಪ ನಾಯಕ ಮಾಲ್‌ನಲ್ಲಿ ಎಸ್‌ಡಿಪಿಐನವರು ವೀರ್‌ ಸಾವರ್ಕರ್‌ ಚಿತ್ರವನ್ನು ತೆಗೆಯಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಜಗಳವಾಗಿತ್ತು. ಅದೇ ದಿನ ರಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಕಾಲ್ನಡಿಗೆ ಕಾರ್ಯಕ್ರಮದ ಭಾಗವಾಗಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್‌ ಬ್ಯಾನರನ್ನು ಪುನೀತ್‌ ಕೆರೆಹಳ್ಳಿ ಮತ್ತು ತಂಡ ಕಿತ್ತು ಹಾಕಿತ್ತು. ಇದು ಶಿಕಾರಿಪುರ ಘಟನೆಗೆ ಪ್ರತೀಕಾರ ಎಂದು ಅದು ಹೇಳಿತ್ತು.

ಇದೀಗ ಶಿವಮೊಗ್ಗದಲ್ಲಿ ಮತ್ತೆ ಸಾವರ್ಕರ್‌ ವಿಚಾರದಲ್ಲಿ ಜಗಳ ಆಗಿರುವುದರಿಂದ ಮತ್ತೆ ಬೆಂಗಳೂರಿನಲ್ಲಿ ಅಂಥ ಘಟನೆಗಳು ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದೆ. ಡಿಸಿಪಿಗಳಿಗೆ ಸೂಚನೆ ನೀಡಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ.

ಶಿವಮೊಗ್ಗ ಚೂರಿ ಇರಿತ: ನಾಲ್ವರ ಬಂಧನ
ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ ಎಂಬ ಯುವಕನ ಮೇಲೆ ಸೋಮವಾರ ಸಂಜೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಜಬೀವುಲ್ಲಾ, ನದೀಂ, ರೆಹಮಾನ್ ಮತ್ತು ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಅರೆಸ್ಟ್

ಜಬೀವುಲ್ಲಾ ಕಾಲಿಗೆ ಶಸ್ತ್ರಚಿಕಿತ್ಸೆ
ಈ ನಡುವೆ, ಚೂರಿ ಇರಿತದ ಆರೋಪಿಗಳಲ್ಲಿ ಒಬ್ಬನಾಗಿರುವ ಜಬೀವುಲ್ಲಾನನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಕಾಲಿನಿಂದ ಗುಂಡು ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ.
ಮೆಗ್ಗಾನ್‌ ಆಸ್ಪತ್ರೆಯ ಜೈಲ್‌ ವಾರ್ಡ್‌ನಲ್ಲಿದ್ದ ಆತನನ್ನು ಆಪರೇಷನ್‌ ಥಿಯೇಟರ್‌ಗೆ ಶಿಫ್ಟ್‌ ಮಾಡಲಾಗಿದೆ.
ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಆತ ಪೊಲೀಸರು ಬಂಧಿಸಲು ಬಂದಾಗ ಪ್ರತಿರೋಧ ತೋರಿದ್ದ. ಈತನೇ ಪ್ರೇಮ್‌ ಕುಮಾರ್‌ಗೆ ಚಾಕುವಿನಿಂದ ಇರಿದ ಆರೋಪಿ ಎಂದು ಹೇಳಲಾಗಿದೆ.

ಇದನ್ನೂ ಓದಿ| Shimogga tense | ಚೂರಿ ಇರಿತ ಆರೋಪಿಗೆ ಗುಂಡೇಟು, ಬಂಧನ

Exit mobile version