Site icon Vistara News

ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಆಗುಂಬೆ ಬಳಿ ಪಲ್ಟಿ, ನಾಲ್ವರಿಗೆ ಗಾಯ

Ambulance

ತೀರ್ಥಹಳ್ಳಿ: ಶವವನ್ನು ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್‌ ಒಂದು ಆಗುಂಬೆ ಬಳಿಯ ಗೌರಿಹಕ್ಲುವಿನಲ್ಲಿ ಪಲ್ಟಿಯಾಗಿ ನಾಲ್ವರು ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಬಾವಿಕೆರೆ ನಿವಾಸಿ ರಾಮ ನಾಯ್ಕ್‌ (೬೮) ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಆಗುಂಬೆ ಮೂಲಕ ತರಲಾಗುತ್ತಿತ್ತು. ಈ ವೇಳೆ ಗೌರಿ ಹಕ್ಲು ಬಳಿ ಮಳೆಯಿಂದ ಒದ್ದೆಯಾದ ರಸ್ತೆಯಲ್ಲಿ ವಾಹನ ಪಲ್ಟಿಯಾಗಿದೆ.

ಜ್ಯೋತಿ ಬಾಯಿ, ರವಿನಾಯ್ಕ್ ಮತ್ತು ಶ್ಯಾಮನಾಯ್ಕ್ ಎಂಬವರಿಗೆ ಗಾಯಗಳಾಗಿವೆ. ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಮತ್ತು ತೀರ್ಥಹಳ್ಳಿಯ ಜೇಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಬೆಳ್ತಂಗಡಿಯ ನಿವಾಸಿ ಕೇಶವ ಬಿನ್ ಲಿಂಗರಾಜು (32) ಎಂಬುವವರಿಗೂ ಗಾಯಗಳಾಗಿವೆ. ಶವವನ್ನು ಬೇರೆ ವಾಹನದಲ್ಲಿ ತರೀಕೆರೆಯ ಬಾವಿಕೆರೆಗೆ ರವಾನೆ ಮಾಡಲಾಗಿದೆ.

Exit mobile version