Site icon Vistara News

Attack in Sagar: ‌ ನನ್ನ ಹೆಂಡ್ತಿ ಜತೆ ನಿಂಗೇನೋ ಕೆಲ್ಸ?; ಯುವಕನಿಗೆ ಗಂಡನ ಅಟ್ಯಾಕ್‌

Attack in Sagar crime news

ಶಿವಮೊಗ್ಗ: ನನ್ನ ಹೆಂಡ್ತಿ ಜತೆ ನಿಂಗೇನೋ ಕೆಲಸ ಎಂದು ಕೇಳಿ ವ್ಯಕ್ತಿಯೊಬ್ಬ (Attack for talking with wife) ಇಬ್ಬರು ಯುವಕರ ಮೇಲೆ ದಾಳಿ ಮಾಡಿದ್ದಾನೆ. ಕತ್ತಿ ಮತ್ತು ರಾಡ್‌ನಿಂದ ಮೊದಲು ಯುವಕನ ಕಾರಿನ ಮೇಲೆ ದಾಳಿ (Attack on Car) ಮಾಡಿದ ವ್ಯಕ್ತಿ, ಯುವಕ ಮನೆಯಿಂದ ಹೊರಬರುತ್ತಿದ್ದಂತೆಯೇ ಆತನ ಮೇಲೂ ಎರಗಿದ್ದಾನೆ.

ಈ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ (Shivamogga News) ಸಾಗರದ (Attack in Sagar) ಬೆಳಲಮಕ್ಕಿಯಲ್ಲಿ. ರವಿ ಕುಮಾರ್‌ ಎಂಬಾತ ಪತ್ನಿ ಜತೆ ಒಂದು ಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಪಕ್ಕದ ಮನೆಯಲ್ಲಿ ನವೀನ್‌ ಎಂಬಾತ ವಾಸವಾಗಿದ್ದ. ನವೀನ್‌ ತನ್ನ ಪತ್ನಿ ಜತೆ ಮಾತನಾಡುತ್ತಿರುವುದು ರವಿ ಕುಮಾರ್‌ ಗಮನಕ್ಕೆ ಬಂದಿತ್ತು. ಈ ವಿಚಾರದಲ್ಲಿ ಮನೆಯಲ್ಲೂ ಮಾತು, ಚಕಮಕಿ ನಡೆದಿತ್ತು.

Attack in Sagar crime news1

ಈ ನಡುವೆ ರವಿ ಕುಮಾರ್‌ ಸಿಟ್ಟಿನಿಂದ ನವೀನ್‌ ಕುಮಾರ್‌ ಮನೆಯ ಬಳಿ ಹೋಗಿದ್ದಾನೆ. ಮೊದಲು ಮನೆಯ ಹೊರಗಿದ್ದ ಕಾರಿನ ಮೇಲೆ ಅಟ್ಯಾಕ್‌ ಮಾಡಿದ್ದಾನೆ. ಕತ್ತಿ ಹಾಗೂ ರಾಡ್‌ನಿಂದ ನವೀನ್ ಕಾರಿಗೆ ಹಾನಿ ಮಾಡಿದ್ದಾರೆ. ಕಾರಿನ ಗಾಜು ಒಡೆಯುತ್ತಿರುವುದನ್ನು ತಿಳಿದ ನವೀನ್‌ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ರವಿ ಕುಮಾರ್‌ ಆತನ ಮೇಲೆ ನೇರ ದಾಳಿ ಮಾಡಿದ.

ಇದನ್ನೂ ಓದಿ: Murder Case : ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ; ಪಾಳು ಬಿದ್ದ ಕಟ್ಟಡದಲ್ಲಿ ಶವ ಪತ್ತೆ

ರವಿ ಕುಮಾರ್‌ ದಾಳಿ ಮಾಡುತ್ತಿರುವುದನ್ನು ನೋಡಿ ನವೀನ್‌ನ ಸ್ನೇಹಿತ ಧರೇಶ್‌ ಅಲ್ಲಿಗೆ ಓಡಿ ಬಂದ. ಆಗ ರವಿ ಕುಮಾರ್‌ ಆತನ ಮೇಲೂ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ನವೀನ್ ಹಾಗೂ ಧರೇಶ್ ಗೆ ಗಾಯಗಳಾಗಿವೆ. ನವೀನ್‌ಗೆ ಸ್ವಲ್ಪ ಹೆಚ್ಚೇ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೊಬ್ಬ ಗಾಯಾಳು ಧರೇಶ್‌ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಸಂಬಂಧ ರವಿ ಕುಮಾರ್ ವಶಕ್ಕೆ ಪಡೆದ ಪೊಲೀಸರು ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version