Site icon Vistara News

Shivamogga Murder: ತಂಗಿಯನ್ನು ಪ್ರೀತಿಸಿದ್ದಕ್ಕೆ ಕಾರಲ್ಲಿ ಯುವಕನ ಕೂಡಿಹಾಕಿ ಬೆಂಕಿ ಹಚ್ಚಿ ಕೊಂದರು!

Brother kills young man in love with sister

ಶಿವಮೊಗ್ಗ: ಕಾರಿಗೆ ಬೆಂಕಿ ಹಚ್ಚಿ ಯುವಕನೊಬ್ಬನನ್ನು ಭೀಕರವಾಗಿ ಸುಟ್ಟು ಹಾಕಿದ (Youth Burnt and Killed) ಘಟನೆ ಶಿವಮೊಗ್ಗದ (Shivamogga News) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ (Murder Case) ನಡೆದಿತ್ತು. ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಎಂಬಾತ ಬರ್ಬರವಾಗಿ ಕೊಲೆಯಾಗಿದ್ದ. ಮಿಸ್ಸಿಂಗ್‌ ಆಗಿದ್ದ ವೀರೇಶ್‌, ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರಿಗೆ ಇದೊಂದು ಪ್ರೇಮ ಪ್ರಕರಣಕ್ಕೆ (Love case) ನಡೆದ ಕೊಲೆ ಎಂದು ತಿಳಿದು ಬಂದಿದೆ.

ಗಾಡಿಕೊಪ್ಪದ ನಿವಾಸಿ ವೀರೇಶ್‌, ಶಿಕಾರಿಪುರದ ಸಂಬಂಧಿ ಯುವತಿ ಅಂಕಿತಾಳನ್ನು ಪ್ರೀತಿಸುತ್ತಿದ್ದ. ಆದರೆ ವೀರೇಶ್‌ ಹಾಗೂ ಅಂಕಿತಾಳ ಮದುವೆಗೆ ಸಹೋದರ ಪ್ರವೀಣ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಮುಗಿಸಿಬಿಡುವ ಪ್ಲ್ಯಾನ್‌ ಮಾಡಿಕೊಂಡಿದ್ದ. ಅದರಂತೆ ಮಾ.15ರ ಶುಕ್ರವಾರದಂದು ಗಾಡಿಕೊಪ್ಪದಲ್ಲಿರುವ ವೀರೇಶ್ ಮನೆಗೆ ಪ್ರವೀಣ್‌ ಬಂದಿದ್ದ. ನನ್ನ ತಂಗಿ ಅಂಕಿತಾಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದು ನಾಟಕವಾಡಿದ್ದ. ಆದರೆ ಆಕೆಯೊಟ್ಟಿಗೆ ಇದ್ದ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡು. ಅವಳಿನ್ನು ಕಾಲೇಜು ಹುಡುಗಿ ಸೋಶಿಯಲ್‌ ಮೀಡಿಯಾದಲ್ಲಿ ಅವುಗಳನ್ನು ಹಾಕಿದರೆ ಕಾಲೇಜಿನಲ್ಲಿ ಆಕೆ ಮಾರ್ಯಾದೆ ಹೋಗುತ್ತದೆ ಎಂದಿದ್ದ. ಮದುವೆ ಮಾಡಿಸುವ ಭರವಸೆ ಕೊಟ್ಟಿದ್ದರಿಂದ ವೀರೇಶ್‌ ಫೋಟೊ ಡಿಲೀಟ್‌ ಮಾಡಿದ್ದ .

ಇದನ್ನೂ ಓದಿ: Road Accident : ಲಾರಿ ಡಿಕ್ಕಿಯಾಗಿ ಎರಡು ತುಂಡಾದರು ಬೈಕ್‌ ಸವಾರರು; ಕಾರಿನ ಬಡಿತಕ್ಕೆ ಮತ್ತಿಬ್ಬರು ಸಾವು

ನಂತರ ಆ ದಿನವೇ ತಡರಾತ್ರಿ ವೀರೇಶ್‌ಗೆ ಫೋನ್‌ ಮಾಡಿದ ಪ್ರವೀಣ್‌, ಅಂಕಿತ ಅಳುತ್ತಿದ್ದಾಳೆ, ಮನೆಗೆ ಬಾ ನಿನ್ನ ನೋಡಬೇಕು ಅಂತಿದ್ದಾಳೆ ಎಂದು ಕರೆಸಿಕೊಂಡಿದ್ದ. ಇವರ ಯಾವ ದುರುದ್ದೇಶವೂ ತಿಳಿಯದ ವೀರೇಶ್‌ ಆತುರದಲ್ಲಿ ತನ್ನ ಸ್ನೇಹಿತನ ಇನ್ನೋವಾ ಕಾರನ್ನು ತೆಗೆದುಕೊಂಡು ಬಂದಿದ್ದ. ಹೊರಡುವಾಗ ತನ್ನ ತಾಯಿಗೆ ಅಂಕಿತಾಳ ಮನೆಯಿಂದ ಫೋನ್‌ ಬಂದಿದೆ ಹೋಗಿ ಬರುವುದಾಗಿ ಹೇಳಿದ್ದ. ಆದರೆ ದಿನ ಕಳೆದರೂ ವಾಪಸ್‌ ಆಗಿರಲಿಲ್ಲ.. ಹೀಗಾಗಿ ಗಾಬರಿಯಾಗಿ ಮರುದಿನ ವೀರೇಶ್‌ ತಾಯಿ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಆದರೆ, ಶನಿವಾರ ಬೆಳಗ್ಗೆ ವೀರೇಶ್‌ ಶವ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸಂಬಂಧ ವೀರೇಶ್ ತಾಯಿ ಮಹಾದೇವಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪ್ರವೀಣ್‌ ಮನೆಯವರೇ ವೀರೇಶ್‌ನನ್ನು ಪುಸಲಾಯಿಸಿ ಕರೆಸಿಕೊಂಡು ಮನಬಂದಂತೆ ಥಳಿಸಿ, ನಂತರ ಡಿಕ್ಕಿಯೊಳಗೆ ಕೂಡಿಹಾಕಿ ಕಾರು ಸಮೇತ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version