Site icon Vistara News

Siddaramaiah: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ

Siddaramaiah

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅನಾರೋಗ್ಯಕ್ಕೊಳಗಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಸಿರಾಟದಲ್ಲಿ ತೊಂದರೆ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದರಿಂದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಗೆ ಮಂಗಳವಾರ ರಾತ್ರಿ ದಾಖಲಿಸಲಾಗಿದೆ. ಎಂಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನೆಬ್ಯುಲೈಸೇಷನ್‌ ಹಾಗೂ ಆಂಟಿಬಯಾಟಿಕ್ಸ್‌ ಮೂಲಕ ಉಪಚರಿಸಲಾಗುತ್ತಿದೆ.

ಸದ್ಯ ಆರೋಗ್ಯವು ಸ್ಥಿರವಾಗಿದೆ ಹಾಗೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆರೋಗ್ಯದ ಸ್ಥಿರತೆಯನ್ನು ನೋಡಿಕೊಂಡು ಒಂದೆರಡು ದಿನದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ವೈದ್ಯರಾದ ಡಾ. ಗುರುಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಗ್ಗೆ ನವದೆಹಲಿಗೆ ತೆರಳಬೇಕಿದ್ದ ಸಿಎಂ ಸಿದ್ದರಾಮಯ್ಯ, ಪ್ರವಾಸವನ್ನು ಕೆಲ ಸಮಯ ಮುಂದೂಡಿ ಆಸ್ಪತ್ರೆಗೆ ಭೇಟಿ ನೀಡಿದರು. ಪತ್ನಿಯನ್ನು ಕಂಡ ನಂತರ ಹೊರಬಂದ ಸಿಎಂ, ಚೆನ್ನಾಗಿದ್ದಾರೆ, ಏನೂ ಸಮಸ್ಯೆ ಇಲ್ಲ ಎಂದು ತಿಳಿಸಿದರು. ನಂತರ ನವದೆಹಲಿಗೆ ಪ್ರಯಾಣಿಸಿದರು. ಪಾರ್ವತಿ ಅವರ ಜತೆಗೆ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ.

ಇದನ್ನೂ ಓದಿ: Brand Bengaluru: ನಿಮ್ಮ ಬೆಂಗಳೂರು ಹೇಗಿರಬೇಕು ನೀವೇ ತಿಳಿಸಿ: ಸರ್ಕಾರಕ್ಕೆ ಸಲಹೆ ನೀಡಲು ಇನ್ನು 9 ದಿನ ಮಾತ್ರ ಬಾಕಿ!

Exit mobile version