Site icon Vistara News

Siddheshwar Swamiji | ಸಂಜೆ 6.40ಕ್ಕೆ ದೇಹಾಂತ್ಯಗೊಂಡ ಸಿದ್ದೇಶ್ವರ ಶ್ರೀಗಳು

Siddheshwar Swamiji

ಬೆಂಗಳೂರು: ಕಳೆದ ಒಂದು ತಿಂಗಳ ಹಿಂದೆ ದೈಹಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಸೋಮವಾರ ಸಂಜೆ 6.40 ನಿಮಿಷಕ್ಕೆ ದೇಹಾಂತ್ಯಗೊಳಿಸಿದ್ದಾರೆ. ಭಕ್ತರು ಹಾಗೂ ಆಶ್ರಮದ ಹಿತೈಷಿಗಳು ರಾತ್ರಿ 9 ಗಂಟೆಯ ಒಳಗೆ ಅಂತಿಮ ವಿಧಿ ವಿಧಾನ ಮುಗಿಸಿದ್ದಾರೆ. ಬಳಿಕ ಸ್ವಾಮೀಜಿಗಳು ದೇಹಾಂತ್ಯಗೊಳಿಸಿದ ವಿಷಯವನ್ನು ಪ್ರಕಟಿಸಲಾಯಿತು.

ಸ್ವಾಮೀಜಿಗಳು ಲಕ್ಷಾಂತರ ಭಕ್ತರನ್ನು ಹೊಂದಿರುವ ಕಾರಣ ಗೊಂದಲ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ವಿಧಿ ವಿಧಾನಗಳನ್ನು ಮುಗಿಸಿಕ ಬಳಿಕ ಅವರ ನಿರ್ಗಮನದ ಸುದ್ದಿಯನ್ನು ಪ್ರಕಟಿಸಲಾಗಿದೆ. ಮಾಜಿ ಸಚಿವ ಎಂಬಿ ಪಾಟೀಲ್​, ಹಾಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಸ್ವಾಮೀಜಿಗಳು ದೇಹಾಂತ್ಯಗೊಳಿಸಿದ ವಿಚಾರವನ್ನು ಬಹಿರಂಗಪಡಿಸಿದರು.

ಇದೇ ವೇಳೆ ಅವರಿಬ್ಬರೂ ಭಕ್ತರ ದರ್ಶನಕ್ಕೆ ಮಾಡಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ಜತೆಗೆ. ಶಾಂತ ರೀತಿಯಿಂದ ವರ್ತಿಸುವಂತೆ ಭಕ್ತರಿಗೆ ಮನವಿ ಮಾಡಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳೂ ಕೂಡ ಸ್ಥಳದಲ್ಲಿದ್ದು ಅಂತ್ಯಕ್ರಿಯೆ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ | Siddheshwar Swamiji | ಜ್ಞಾನದ ನಿಧಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ದೇಹಾಂತ್ಯ

Exit mobile version