Site icon Vistara News

Sindagi Robbery: ಸಿಂದಗಿ ಚಿನ್ನದ ಅಂಗಡಿ ಬಳಿ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನ; ಇಬ್ಬರ ಬಂಧನ

gold shop robbery attempt in sindagi and Two arrested

#image_title

ವಿಜಯಪುರ: ಜ್ಯುವೆಲ್ಲರಿ ಶಾಪ್‌ ಬಳಿ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿದ ಘಟನೆ (Sindagi Robbery) ಜಿಲ್ಲೆಯ ಸಿಂದಗಿ ನಗರದ ಮಾರುಕಟ್ಟೆಯಲ್ಲಿ ನಡೆದಿದ್ದು, ಈ ವೇಳೆ ಸ್ಥಳೀಯರು, ಇಬ್ಬರು ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಊರನ ಹಿರಿಯ ಮಠದ ಹತ್ತಿರದ ಹಂಚಿನಾಳ ಎಂಬುವವರಿಗೆ ಸೇರಿದ ಧನಲಕ್ಷ್ಮೀ ಜ್ಯುವೆಲ್ಲರಿ ಬಳಿ ದುಷ್ಕರ್ಮಿಗಳು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಚಿನ್ನದ ಅಂಗಡಿ ದರೋಡೆಗೆ ಐವರು ದುಷ್ಕರ್ಮಿಗಳು ಬಂದ ಶಂಕೆ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಐವರ ಪೈಕಿ ಇಬ್ಬರು ಸಿಕ್ಕಿಬಿದ್ದಿದ್ದು, 1 ನಾಡ ಪಿಸ್ತೂಲ್​ , 2 ಮಚ್ಚು, 2 ಜೀವಂತ ಗುಂಡು, 2 ಬೈಕ್‌ಗಳನ್ನು ಸಿಂದಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿಯಲ್ಲಿ ಆಟೋಗೆ ಕಾರು ಡಿಕ್ಕಿಯಾಗಿ 9 ಜನರಿಗೆ ಗಾಯ

ಬಳ್ಳಾರಿ: ನಗರದ ಹೊರವಲಯದ ಬೆಂಗಳೂರು ರಸ್ತೆಯ ಬಾಲಾಜಿ ಜಿನ್ನಿಂಗ್ ಮಿಲ್ ಹತ್ತಿರ ಆಟೋಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ 9 ಮಂದಿಗೆ ಗಾಯಗಳಾಗಿವೆ. ಆಟೋದಲ್ಲಿ ಬಳ್ಳಾರಿಗೆ ಬರುತ್ತಿದ್ದ ಶಿಕ್ಷಕರಾದ ಪುಷ್ಪವತಿ, ನಾಗವೇಣಿ, ಕವಿತಾ, ಭಾಗ್ಯಮ್ಮ, ಗಾಯತ್ರಿ ಹಾಗೂ ಸಿವಿಲ್ ಎಂಜಿನಿಯರ್ ಶ್ರೀನಿವಾಸ ಗಾಯಗೊಂಡಿದ್ದಾರೆ. ಇವರನ್ನು ಬಳ್ಳಾರಿ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. 7 ಜನರಿಗೆ ಸಣ್ಣಪುಟ್ಟ ಗಾಯವಾದರೆ, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ | Theft Case: ಚಿನ್ನಾಭರಣ, ಮೊಬೈಲ್‌, ಬೈಕ್‌ ಕದ್ದವರನ್ನು ಬಂಧಿಸಿದ ಬೆಂಗಳೂರು ಪೊಲೀಸ್; ಶಿವಮೊಗ್ಗದಲ್ಲಿ ಮಚ್ಚೆ ಗೂಬೆಗಳ ಮಾರಾಟಕ್ಕೆ ಯತ್ನ

Exit mobile version