Site icon Vistara News

Soldier died : ಊರಿನ ಜಾತ್ರೆಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್‌ ಅಪಘಾತದಲ್ಲಿ ಮೃತ್ಯು, ಎಲ್ಲೆಡೆ ಕಂಬನಿ

ಮೃತ ಯೋಧ ನಾಗಪ್ಪ ಉದುಮೇಶಿ

#image_title

ಧಾರವಾಡ: ಊರಿನ ಜಾತ್ರೆಗೆ ಬಂದಿದ್ದ ಸೈನಿಕರೊಬ್ಬರು ಗೆಳೆಯರೊಂದಿಗೆ ಟ್ರ್ಯಾಕ್ಟರ್‌ನಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದ ಸೈನಿಕರಾಗಿರುವ ನಾಗಪ್ಪ ಉದುಮೇಶಿ (27) ಮೃತಪಟ್ಟ ಸೈನಿಕರು.

ಇವರು ಬೇರೆ ರಾಜ್ಯದಲ್ಲಿ ಸೈನಿಕರಾಗಿದ್ದು, ರಜೆ ಮೇಲೆ ಊರಿಗೆ ಬಂದಿದ್ದರು. ರಜೆಯ ಸಂದರ್ಭದಲ್ಲೇ ಜಾತ್ರೆ ಬಂದಿದ್ದು ಅವರಿಗೆ ತುಂಬ ಖುಷಿಯಾಗಿತ್ತು. ಹೀಗಾಗಿ ಅವರು ಗರಗದ ಶ್ರೀ ಮಡಿವಾಳೇಶ್ವರ ಜಾತ್ರೆಗೆ ಸ್ನೇಹಿತರೊಂದಿಗೆ ಸಂಭ್ರಮದಿಂದ ತೆರಳಿದ್ದರು. ಹಾಗೆ ಹೋಗಿ ಹಿಂದಿರುಗಿ ಬರುವಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಗರಗ-ಲೋಕೂರು ಕ್ರಾಸ್ ಬಳಿ‌ ಅಪಘಾತಕ್ಕೀಡಾಗಿದೆ. ಟ್ರ್ಯಾಕ್ಟರ್ ಮೇಲಿನಿಂದ ಬಿದ್ದ ಸೈನಿಕ ನಾಗಪ್ಪ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಊರಿನಲ್ಲಿ ಯೋಧನಿಗೆ ಅಂತಿಮ ನಮನ

ಇತ್ತೀಗಷ್ಟೇ ಒಂದು ಮಗುವಿನ ತಂದೆಯಾಗಿದ್ದ ಸೈನಿಕ ಸಾವಿಗೆ ಇಡೀ ಗ್ರಾಮವೇ ಕಂಬನಿ ಹಾಕುತ್ತಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಸರಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. ಊರಿನ ಜನರು ಅಗಲಿದ ಸೈನಿಕರಿಗೆ ಗೌರವ ಸಲ್ಲಿಸಿದರು. ಮೃತ ಸೈನಿಕರ ಕುಟುಂಬಸ್ಥರಿಗೆ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಅರ ಪತ್ನಿ ಶಿವಲೀಲಾ ಕುಲಕರ್ಣಿ ಸಾಂತ್ವನ ಹೇಳಿದರು.

ಇದನ್ನೂ ಓದಿ : Kargil Vijay Divas: ಅಮ್ಮಾ‌, ಗೆದ್ದರೆ ತಿರಂಗಾ ಅರಳಿಸಿ ಬರುತ್ತೇನೆ; ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!

Exit mobile version