Site icon Vistara News

ಉಡುಪಿ ಶ್ರೀಕೃಷ್ಣನಿಗೆ ಇಂದು ಸಂಭ್ರಮದ ಲೀಲೋತ್ಸವ

udupi

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪರ್ಯಾಯ ಪೀಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದರು.

ಹಾಲು ಹಾಗೂ ನೀರಿನ ಮೂಲಕ ಶ್ರೀಗಳು ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಿದರು. ಅರ್ಘ್ಯ ಸಮರ್ಪಣೆ ಬಳಿಕ ಉಂಡೆ, ಚಕ್ಕುಲಿ ಇತ್ಯಾದಿಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಮಹಾಮಂಗಳಾರತಿ, ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಣೆ ಸಂದರ್ಭ ಮಠದ ಅರ್ಚಕರು ಹಾಗೂ ಭಕ್ತರು ಉಪಸ್ಥಿತರಿದ್ದು ದೇವರ ದರ್ಶನ ಪಡೆದರು.

ಈ ವೇಳೆ ಖ್ಯಾತ ಖಳ ನಟ ರವಿಶಂಕರ್ ಅವರು ಶ್ರೀ ಕೃಷ್ಣನ ದರ್ಶನ ಪಡೆದರು. ಶ್ರೀಕೃಷ್ಣನಿಗೆ ವೈಭವದ ಲೀಲೋತ್ಸವ ಇವತ್ತು (ಆ.20) ಮಧ್ಯಾಹ್ನ ನಡೆಯಲಿದೆ.

Exit mobile version