Site icon Vistara News

Suicide Case | ಕಬಾಬ್‌ ಟೇಸ್ಟ್‌ ಇಲ್ಲವೆಂದು ಪತ್ನಿಗೆ ಹೊಡೆದ; ಹೆದರಿ ನೇಣಿಗೆ ಕೊರಳೊಡ್ಡಿದ!

suicide case

ಆನೇಕಲ್‌: ಪತ್ನಿ ಮಾಡಿದ ಕಬಾಬ್ ಟೇಸ್ಟ್ ಇಲ್ಲವೆಂದು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪತಿ ಬಳಿಕ ಹೆದರಿ ನೇಣಿಗೆ ಕೊರಳೊಡ್ಡಿದ (Suicide Case) ಪ್ರಸಂಗ ನಡೆದಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಮೈಲಸಂದ್ರ ನಿವಾಸಿ ಸುರೇಶ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವ.

ಸುರೇಶ್‌ ಮತ್ತವನ ಪತ್ನಿ ಶಾಲಿನಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು‌. ಮದ್ಯ ವ್ಯಸನಿಯಾಗಿದ್ದ ಸುರೇಶ್‌ಗೆ ಕಬಾಬ್ ತಿನ್ನುವ ಆಸೆಯಾಗಿ ಮನೆಗೆ ಚಿಕನ್ ತೆಗೆದುಕೊಂಡು ಬಂದಿದ್ದ. ಕಬಾಬ್ ಮಾಡಿ ಕೊಟ್ಟಾಗ ಟೇಸ್ಟ್‌ ಕಡಿಮೆಯಾಗಿದೆ ಎಂದು ಕ್ಯಾತೆ ತೆಗೆದ ಸುರೇಶ್‌, ಪತ್ನಿ ಶಾಲಿನಿ ಜತೆಗೆ ಗಲಾಟೆ ಮಾಡಿದ್ದಾನೆ.

ಗಲಾಟೆ ವಿಕೋಪಕ್ಕೆ ತಿರುಗಿ ಶಾಲಿನಿಗೆ ಚಾಕು ಹಾಗೂ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಾಲಿನಿ ಕುಸಿದು ಬಿದ್ದಿದ್ದು, ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದರಿಂದ ಹೆದರಿದ ಸುರೇಶ್ ಮೈಲಸಂದ್ರ ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | ಒಂದೇ ಮರದಲ್ಲಿ ಕಂಡುಬಂತು ಮೂವರು ಸೋದರಿಯರ ಮೃತದೇಹ, ಆತ್ಮಹತ್ಯೆ ಶಂಕೆ

Exit mobile version