Site icon Vistara News

ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೊಠಡಿಯಲ್ಲಿ ಹಾಜರಾದ ವಧು

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಪಾಂಡವಪುರ ತಾಲೂಕಿನ ಲಿಂಗಾಪುರದ ಐಶ್ವರ್ಯ ಮತ್ತು ಶ್ರೀರಂಗಪಟ್ಟಣದ ಲಕ್ಷ್ಮೀಪುರದ ಅವಿನಾಶ್‌ ಮದುವೆ ನಡೆಯಿತು. ಮದುವೆ ನಡೆದ ಮರು ಕ್ಷಣವೇ ಕಲ್ಯಾಣ ಮಂಟಪದಿಂದ ನೇರವಾಗಿ ಪಾಂಡವಪುರದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ತನ್ನ ಮೊದಲ‌ ವರ್ಷದ‌ ಎಂಕಾಂ ಪರೀಕ್ಷೆಯನ್ನು ಐಶ್ವರ್ಯ ಬರೆದಿದ್ದಾರೆ.

ರಾಜ್ಯದಲ್ಲಿ ಕೆಲ ದಿನಗಳ ಹಿಂದಷ್ಟೆ ಹಿಜಾಬ್‌ ಗಲಾಟೆ ನಡೆದಿತ್ತು. ಪರೀಕ್ಷೆಗಿಂತಲೂ ಹಿಜಾಬ್‌ ಮುಖ್ಯ ಎಂದು ಅನೇಕ ವಿದ್ಯಾರ್ಥಿನಿಯರು ತೀರ್ಮಾನಿಸಿ ಪರೀಕ್ಷೆಯಿಂದ ಹೊರಗೆ ಉಳಿದಿದ್ದರು. ಇದೀಗ ಐಶ್ವರ್ಯ ನಡೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಐಶ್ವರ್ಯ ತನ್ನ ಮದುವೆಯಾದ ಬಳಿಕ ಕಲ್ಯಾಣ ಮಂಟಪದಿಂದ ಪರೀಕ್ಷಾ ಕೊಠಡಿಗೆ ಹಾಜರಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾಳೆ. ಶಿಕ್ಷಣವನ್ನು ಯಾವ ಸಂದರ್ಭದಲ್ಲೂ ಮೊಟಕುಗೊಳಿಸಬಾರದೆಂದು ಈಕೆ ತೋರಿಸಿಕೊಟ್ಟಿದ್ದಾಳೆ. ಮದುವೆಯ ದಿನವೇ ಪರೀಕ್ಷೆ ಬರೆಯಲು ಕಳಿಸಿಕೊಟ್ಟ ಐಶ್ವರ್ಯ ಪತಿ ಹಾಗೂ ಕುಟುಂಬವೂ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಪುನೀತ್ ರಾಜಕುಮಾರ್‌ ಪೋಟೋ ಸಮ್ಮುಖದಲ್ಲಿ ಮದುವೆಯಾದ ಜೋಡಿ – 

Exit mobile version