Site icon Vistara News

Car Catches Fire: ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಕಾರು; ಚಾಲಕ ಪ್ರಾಣಾಪಾಯದಿಂದ ಪಾರು

Car Catches Fire

#image_title

ಆನೇಕಲ್: ಬೆಂಗಳೂರು-ಹೊಸೂರು ಹೆದ್ದಾರಿಯ ಕೂಡ್ಲು ಗೇಟ್‌ ಬಳಿ ಚಲಿಸುತ್ತಿರುವಾಗಲೇ ಕಾರೊಂದು ಹೊತ್ತಿ ಉರಿದಿದ್ದು (Car Catches Fire) , ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಚಾಲಕ ಹೊರಗೆ ಬಂದಿದ್ದರಿಂದ ಅಪಾಯ ತಪ್ಪಿದೆ.

ಚಂದಾಪುರ ಸಮೀಪದ ಸಂಪಿಗೆ ನಗರದ ಬರುಣ್ ಕುಮಾರ್ ಅಪಾಯದಿಂದ ಪಾರಾದ ಕಾರಿನ ಮಾಲೀಕ. ಕಾರಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಅವರು ಕೆಳಗಿಳಿದ್ದಾರೆ. ನಂತರ ಕೆಲವೇ ಕ್ಷಣಗಳಲ್ಲಿ ಇಡೀ ಕಾರು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸರು ಧಾವಿಸಿ ನಂದಿಸುವ ಯತ್ನ ಮಾಡಿದರು.

ಚಂದಾಪುರ ಕಡೆಯಿಂದ ಬೆಂಗಳೂರು ಮಾರ್ಗವಾಗಿ ಹೋಗುವಾಗ ಅವಘಡ ನಡೆದಿದೆ. ನಡುರಸ್ತೆಯಲ್ಲಿ ಕಾರು ಹೊತ್ತಿ ಉರಿದ ಕಾರಣ ಹೆದ್ದಾರಿಯಲ್ಲಿ ಮೂರು ಕಿಲೋಮೀಟರ್‌ವರೆಗೂ ವಾಹನ ದಟ್ಟಣೆ ಉಂಟಾಯಿತು.

Exit mobile version