Site icon Vistara News

Murder Case: ಮನೆಗೆ ಬರಬೇಡ ಎಂದ ಬಾವನ ಇಬ್ಬರು ಸಹೋದರಿಯರನ್ನು ಕಲ್ಲಿನಿಂದ ಜಜ್ಜಿ ಕೊಂದ ಬಾಮೈದ

The incident of murder of two women took place in Banahatti

#image_title

ಬಾಗಲಕೋಟೆ: ಮನೆಗೆ ಬರಬೇಡ ಎಂದ ಬಾವನ ಇಬ್ಬರು ಸಹೋದರಿಯರನ್ನು ಕಲ್ಲಿನಿಂದ ಜಜ್ಜಿ ಬಾಮೈದನೇ ಕೊಲೆ ಮಾಡಿರುವ ಭೀಕರ ಘಟನೆ‌ (Murder Case) ಜಿಲ್ಲೆಯ ಬನಹಟ್ಟಿ ನಗರದ ಶನಿವಾರಪೇಟೆಯಲ್ಲಿ ನಡೆದಿದೆ.

ಬೋರವ್ವ ಮಿರ್ಜಿ (40), ಯಲ್ಲವ್ವ ಪೂಜಾರ (48) ಕೊಲೆಯಾದವರು. ಕಾಡಪ್ಪ ಭುಜಂಗ ಆರೋಪಿ. ಈತ ಅಕ್ಕನ ಮನೆಗೆ ಬಂದಾಗ ಬಾವನ ಸಹೋದರಿಯರು ಮನೆಗೆ ಬರಬೇಡ ಎಂದಿದ್ದಾರೆ. ಈ ವಿಚಾರಕ್ಕೆ ಮಹಿಳೆಯರಿಬ್ಬರ ಜತೆ ಆರೋಪಿ ಜಗಳ ಮಾಡಿದ್ದಾನೆ. ನಂತರ ಗಲಭೆ ತಾರಕಕ್ಕೇರಿದಾಗ ಕೋಪದಿಂದ ಇಬ್ಬರು ಮಹಿಳೆಯರ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಬೇರೆ ಕಾರಣವೇನಾದರೂ ಇರಬಹುದಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನೈತಿಕ ಸಂಬಂಧ ಶಂಕೆಯಲ್ಲಿ ಹೆಂಡತಿ ಮಕ್ಕಳಿಗೆ ಬೆಂಕಿ ಹಚ್ಚಿದ ಗಂಡ, ಮಹಿಳೆ ಸಾವು

ತುಮಕೂರು: ಅನೈತಿಕ ಸಂಬಂಧ ಶಂಕೆಯಲ್ಲಿ ಹೆಂಡತಿ, ಮೂವರು ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆ‌ಯ ಮಧುಗಿರಿ ತಾಲೂಕಿನ‌ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ.

ಶಾಂತಮ್ಮ ಮೃತರು. ಅಕ್ಷಯ (17), ಅಕ್ಷಿತಾ (13) ಹಾಗೂ ಅಮೃತಾ (10) ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರಿಗೂ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಕಿ ಹಚ್ಚಿದ ಮೇಲೆ ಜೀವ ಉಳಿಸಿಕೊಳ್ಳಬಾರದೆಂದು ರೂಮ್‌ಗೆ ಬೀಗ ಹಾಕಿ ಪಾಪಿ ಪತಿ ಪರಾರಿಯಾಗಿದ್ದ ರಾಮಾಂಜಿಯನ್ನು ಮಿಡಿಗೇಶಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಗಗನಸಖಿ ಸಾವು: ಆತ್ಮಹತ್ಯೆ ಅಲ್ಲ ಕೊಲೆ?; ಮಗಳನ್ನು ಪ್ರಿಯಕರನೇ ತಳ್ಳಿದ್ದು ಎಂದು ತಾಯಿ ದೂರು

Exit mobile version