Site icon Vistara News

Theft Case : ಕೊನೆಗೂ ಕಳ್ಳನಿಂದ ಮರಳಿ ಸಿಕ್ತು ರಿವಾಲ್ವರ್‌; ಜಿಗಿದು ಜಿಗಿದು ಕಸಿದುಕೊಂಡ ಎಸ್‌ಪಿ ಇಶಾಪಂತ್‌

theft case in kalaburagi

ಕಲಬುರಗಿ : ತನ್ನನ್ನು ಅಟ್ಟಾಡಿಸಿಕೊಂಡು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ (Theft case) ಪಿಎಸ್‌ಐ ಕೈಯಲ್ಲಿದ್ದ ಸರ್ವಿಸ್‌ ರಿವಾಲ್ವರ್‌ ಕಸಿದು ಪರಾರಿ ಆಗಿದ್ದ. ಮರವೇರಿ ಕುಳಿತ ಕಳ್ಳನಿಂದ ಅಂತೂ ಸತತ ಮನವೊಲಿಕೆ ಮಾಡಿ ಎಸ್‌ಪಿ ಇಶಾಪಂತ್‌ (SP Ishapant) ಕಳ್ಳನಿಂದ ರಿವಾಲ್ವರ್‌ ವಾಪಸ್‌ ಪಡೆದಿದ್ದಾರೆ.

ಪಿಎಸ್‌ಐ ಸರ್ವಿಸ್ ರಿವಾಲ್ವರ್‌ ಕಸಿದುಕೊಂಡು ಕಳ್ಳನೊಬ್ಬ (Theft Case) ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಅಫಜಲಪುರ ಪಟ್ಟಣದಲ್ಲಿ ನಡೆದಿತ್ತು. ಅಫಜಲಪುರದ ಪಿಎಸ್‌ಐ ಭೀಮರಾಯ್ ಬಂಕಲಿ ಅವರ ರಿವಾಲ್ವರ್‌ ಕಿತ್ತುಕೊಂಡು (Snatch the revolver) ಖಾಜಾ ಗಾಯಕವಾಡ ಎಂಬಾತ ಓಡಿಹೋಗಿದ್ದ.

ಬಂಧಿತ ಆರೋಪಿ ಖಾಜಾಪ್ಪ ಗಾಯಕವಾಡ

ಖಾಜಾ ಗಾಯಕವಾಡನನ್ನು ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಸಿಸಿಬಿ ಪೊಲೀಸರು ಆಗಮಿಸಿದ್ದರು. ಕಳ್ಳತನ ಮಾಡಿ ಕ್ಷಣಾರ್ಧದಲ್ಲೇ ಪರಾರಿ ಆಗುತ್ತಿದ್ದ ಇವನನ್ನು ಹೆಡೆಮುರಿ ಕಟ್ಟಲು ಪೊಲೀಸರು ಪ್ಲ್ಯಾನ್‌ ಮಾಡಿದ್ದರು. ಇಂದು ಸೋಮವಾರ (ಜು.17) ಸೊನ್ನ ಗ್ರಾಮದ ಬಳಿ ಡಸ್ಟರ್ ವಾಹನದಲ್ಲಿ ಖಾಜಾ ಕುಳಿತಿದ್ದ. ಇದರ ಮಾಹಿತಿ ಪಡೆದು ಪಿಎಸ್‌ಐ ಭೀಮರಾಯ್‌ ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಇದರಿಂದ ಅಲರ್ಟ್‌ ಆದ ಖಾಜಾ ಏಕಾಏಕಿ ಸರ್ವಿಸ್‌ ರಿವಾಲ್ವರ್‌ ಕಸಿದು ಪರಾರಿ ಆಗಿಬಿಟ್ಟಿದ್ದ.

ಬಳ್ಳೂರ್ಗಿ ಮೂಲದ ಖಾಜಾ ಗಾಯಕವಾಡ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ಈತನನ್ನು ಹಿಡಿದು ಬಂಧಿಸಬೇಕೆಂದು ಬಂದ ಪೊಲೀಸರ ರಿವಾಲ್ವರ್‌ ಕಸಿದು ಖಾಜಪ್ಪ ಪರಾರಿ ಆಗಿದ್ದ. ಇತ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಖಾಜಪ್ಪ ಬೃಹತ್ ಮರ ಏರಿ ಕುಳಿತಿದ್ದ.

ಅಫಜಲಪುರದಿಂದ ಸುಮಾರು 6 ಕಿ.ಮೀವರೆಗೂ ಓಡಿ ಸುಸ್ತಾದ ಖಾಜಪ್ಪ, ಅಫಜಲಪುರ- ಬಳೂರ್ಗಿ ಗ್ರಾಮದ ಮಧ್ಯದಲ್ಲಿರುವ ಮರ ಏರಿ ಕುಳಿತಿದ್ದ. ಮರ ಏರಿ ಕುಳಿತಿರುವ ಖಾಜಪ್ಪನನ್ನು ಕೆಳಗಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆತನ ಕೈಯಲ್ಲಿ ಪುಲ್ ಲೋಡೆಡ್ ಸರ್ವಿಸ್‌ ರಿವಾಲ್ವರ್‌ ಇದ್ದರಿಂದ ಪೊಲೀಸರಿಗೆ ಮತ್ತಷ್ಟು ಆತಂಕ ಹೆಚ್ಚಾಗಿತ್ತು.

ಇದನ್ನೂ ಓದಿ: Jain Muni Murder: ಮಗ ಹೀಗೆ ಮಾಡಿದ್ರೆ ಏನು ಮಾಡೋದು: ಆರೋಪಿ ಹಸನ್‌ ತಂದೆ ಭಾವುಕ

ವಾಪಸ್‌ ನೀಡುತ್ತಿದ್ದವನಿಂದ ಜಿಗಿದು ರಿವಾಲ್ವರ್‌ ಪಡೆದ ಎಸ್‌ಪಿ ಇಶಾಪಂತ್‌

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಇಶಾಪಂತ್ ಭೇಟಿ ನೀಡಿದ್ದರು. ಖಾಜಾಪ್ಪ ಮನವೊಲಿಸಲು ನಾನಾ ರೀತಿಯ ಕಸರತ್ತು ಮಾಡಿದರು. ಇದ್ಯಾವುದಕ್ಕೂ ಜಗ್ಗದೆ ಇದ್ದಾಗ ಆರೋಪಿಯ ತಾಯಿ ಹಾಗೂ ತಮ್ಮನನ್ನು ಕರೆಸಿ ಮನವೊಲಿಸಿದಾಗ, ಪೊಲೀಸರಿಗೆ ವಾಪಸ್‌ ರಿವಾಲ್ವರ್‌ ನೀಡಿದ್ದಾನೆ.

ರಿವಾಲ್ವರ್‌ ಪಡೆದುಕೊಳ್ಳುವಾಗ ಎಸ್‌ಪಿ ಇಶಾಪಂತ್‌ ಜಿಗಿದು ಜಿಗಿದು ಕಸಿದುಕೊಂಡಿದ್ದಾರೆ. ಸದ್ಯ ರಿವಾಲ್ವರ್‌ ವಾಪಸ್‌ ಪಡೆದು ಆತನನ್ನು ಮರದಿಂದ ಕೆಳಗಿಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version