Site icon Vistara News

Youth drowned | ಹೊಸ ವರ್ಷದ ಮೊದಲ ದಿನ ತುಂಗಭದ್ರೆಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲು

three drowned

ಹಾವೇರಿ: ಹೊಸ ವರ್ಷಾಚರಣೆಯ ಸಂಭ್ರಮದ ನಡುವೆ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ (Youth drowned). ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ರಾಣೇಬೆನ್ನೂರ ನಗರ ನಿವಾಸಿಗಳಾದ ನವೀನ ಕೂರಗುಂದ( ೨೦), ವಿಕಾಶ ಪಾಟೀಲ್ (20), ಪ್ರಮೋದ (25) ನೀರುಪಾಲಾದ ಯುವಕರು. ಜನವರಿ ಒಂದರ ಸಂಜೆಯ ಹೊತ್ತಿಗೆ ಈ ಯುವಕರು ನದಿ ದಂಡೆಗೆ ತೆರಳಿದ್ದು, ರಾತ್ರಿಯಾದರೂ ಯಾಕೆ ಮರಳಲಿಲ್ಲ ಎಂದು ಹುಡುಕಲು ಶುರು ಮಾಡಿದಾಗ ಅವರ ಬಟ್ಟೆಗಳು ರಾತ್ರಿ ವೇಳೆಗೆ ನದಿ ತೀರದಲ್ಲಿ ಪತ್ತೆಯಾಯಿತು. ಅಲ್ಲಿಗೆ ಅವರು ನದಿಯಲ್ಲಿ ಈಜಲು ತೆರಳಿ ಕಣ್ಮರೆಯಾಗಿದ್ದು ಸ್ಪಷ್ಟವಾಯಿತು.

ಕಣ್ಮರೆಯಾದ ಯುವಕರಿಗಾಗಿ ಹುಡುಕಾಟ

ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯಿಂದ ತುಂಗಭದ್ರಾ ನದಿಯಲ್ಲಿ ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಹೊಸ ವರ್ಷದ ಮೊದಲ ದಿನದಂದು ರಾಜ್ಯಾದ್ಯಂತ ಹಲವು ಅಪಘಾತ, ಅವಘಡಗಳು ಸಂಭವಿಸಿದ್ದು, ೧೫ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ | Road Accident | ಹಲವರ ಬಾಳಲ್ಲಿ ಕತ್ತಲೆ ತಂದ ಹೊಸ ವರ್ಷದ ಮೊದಲ ದಿನ; ವಿವಿಧೆಡೆ ಅಪಘಾತಗಳಿಗೆ 10 ಮಂದಿ ಸಾವು

Exit mobile version