Site icon Vistara News

ಶಿಕಾರಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಟಿಪ್ಪು ಸಾಂಗ್; ಬಾವುಟ ಹಿಡಿದು ಹೆಜ್ಜೆ ಹಾಕಿದ ಯುವಕರು

ಟಿಪ್ಪು ಸಾಂಗ್

ಶಿವಮೊಗ್ಗ: ರಾಜ್ಯದಲ್ಲಿ ವಿವಿಧೆಡೆ ಟಿಪ್ಪು ಸುಲ್ತಾನ್‌ ಹಾಗೂ ಸಾವರ್ಕರ್‌ ಫ್ಲೆಕ್ಸ್‌ ತೆರವು ವಿಚಾರವಾಗಿ ಗಲಭೆಗಳು ನಡೆಯುತ್ತಿರುವ ನಡುವೆ ಜಿಲ್ಲೆಯಲ್ಲಿ ನಡೆದ ಗಣೋಶೋತ್ಸವವೊಂದರಲ್ಲಿ ಟಿಪ್ಪು ಹಾಡುಗಳು ಮೊಳಗಿವೆ.

ಶಿಕಾರಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಟಿಪ್ಪು ಸಾಂಗ್ ಕೇಳಿಬಂದಿದ್ದು, ಟಿಪ್ಪುವಿನ ಬಾವುಟ ಹಿಡಿದು ಯುವಕರು ಕುಣಿದಿರುವ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ. ಶಿಕಾರಿಪುರದ ಜಯನಗರ ಗಣಪತಿ ವಿಸರ್ಜನೆ ಮಹೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿಜೆನಲ್ಲಿ ಟಿಪ್ಪು ಹಾಡು ಹಾಕಲಾಗಿದ್ದು, ʼಸ್ವಾತಂತ್ರ್ಯ ಭಾರತದ ಕನಸಿನ‌ ಸುಲ್ತಾನ್ ಟಿಪ್ಪುವಿಗೆ ಸಲಾಂ ಸಲಾಂʼ ಹಾಡಿಗೆ ಯುವಕರು ಟಿಪ್ಪುವಿನ ಬಾವುಟ ಹಿಡಿದು ಎಂಬ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ | ಭದ್ರಾವತಿ ಹಿಂದು ಮಹಾಸಭಾ ಗಣೇಶ ವಿಸರ್ಜನಾ ಮೆರವಣಿಗೆ ಅದ್ಧೂರಿ; ರಾರಾಜಿಸಿದ ಪುನೀತ್‌, ಹರ್ಷ ಪೋಸ್ಟರ್‌!

Exit mobile version