Site icon Vistara News

Murder Case: ಅಳಿಯನ ಕೊಂದು ಅಪಘಾತ ಎಂದು ಕಥೆ ಕಟ್ಟಿದ ʼಮನಿಹಾಳʼ ಮಾವ!

belgavi mava killed aliya

ಬೆಳಗಾವಿ: ಇದು ಮುದ್ದಿನ ಮಾವನ ಸ್ಟೋರಿ ಅಲ್ಲ, ಹದ್ದಿನಂತೆ ಕುಕ್ಕಿ ಪ್ರಾಣ ಕಿತ್ತ ಮಾವನ ಸ್ಟೋರಿ. ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ (Illicit relationship) ಹೊಂದಿದ್ದಾನೆ ಎಂಬ ಶಂಕೆಯಿಂದ ಅಳಿಯನನ್ನೇ ಈ ʼಮನಿಹಾಳʼ ಮಾವ ಕೊಲೆ (Murder Case) ಮಾಡಿದ್ದಾನೆ.

ಸ್ವಂತ ಅಳಿಯನನ್ನೆ ಕತ್ತು ಹಿಸುಕಿ ಕೊಲೆಗೈದ ಪಾಪಿ ಮಾವ, ನಂತರ ಇದು ಅಪಘಾತ ಎಂದು ಕತೆ ಕಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ನೀಲಪ್ಪ ರೋಗನ್ನವರ್(28) ಕೊಲೆಯಾದ ಅಳಿಯ. ಫಕೀರಪ್ಪ ಮನಿಹಾಳ ಸ್ವಂತ ಅಳಿಯನನ್ನೆ ಕೊಲೆ ಮಾಡಿದ ಮಾವ.

ಕತ್ತು ಹಿಸುಕಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಮಾವ ಫಕೀರಪ್ಪ ಯತ್ನಿಸಿದ್ದ. ದಾರಿಯಲ್ಲಿ ಬೈಕ್‌ ಮಗುಚಿಹಾಕಿ ಹೆಣವನ್ನು ಅಲ್ಲಿಟ್ಟು ಬೈಕ್ ಅಪಘಾತ ಎಂದು ತೋರಿಸಿದ್ದ. ಪೊಲೀಸರು ಸರಿಯಾಗಿ ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಮಾವ ಫಕೀರಪ್ಪನನ್ನು ಕಟಕೋಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಣಿಗಲ್‌ನಲ್ಲಿ ಅಸ್ಥಿಪಂಜರ ಪತ್ತೆ

ತುಮಕೂರು: ಚಿತ್ರದುರ್ಗದಲ್ಲಿ ಒಂದೇ ಮನೆಯಲ್ಲಿ ಐದು ಅಸ್ಥಿಪಂಜರ (skeleton found) ಪತ್ತೆಯಾದ ಮರುದಿನವೇ ತುಮಕೂರಿನ ಕುಣಿಗಲ್ ತಾಲೂಕಿನಲ್ಲೂ ಒಂದು ಅಸ್ಥಿಪಂಜರ ಪತ್ತೆಯಾಗಿದೆ.

ಕಿತ್ತಾನಮಂಗಲ ಕೆರೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಇದು ರಂಜಿತಾ ಎಂಬ ಮಹಿಳೆಯ ಕಳೇಬರ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ 6 ತಿಂಗಳ ಹಿಂದೆ ಕಲಿಪಾಳ್ಯ ಗ್ರಾಮದ ರಂಜಿತಾ ಎಂಬ ಮಹಿಳೆ ನಾಪತ್ತೆಯಾಗಿದ್ದರು. ಅಸ್ಥಿಪಂಜರದ ಬಳಿ ಕಾಲು ಚೈನ್, ನೈಟಿ, ಕೈಬಳೆಗಳು ಪತ್ತೆಯಾಗಿವೆ. ಅಸ್ಥಿಪಂಜರವನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಚಿಂತಾಮಣಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಭೀಕರ ಕೊಲೆ

Exit mobile version