Site icon Vistara News

Murder Case: ಕಲ್ಲಿನಿಂದ ಜಜ್ಜಿ ನಡುಬೀದಿಯಲ್ಲೇ ಯುವಕನ ಹತ್ಯೆ, ಸಿಸಿಟಿವಿಯಲ್ಲಿ ಸಿಕ್ಕಿತು ಬರ್ಬರ ದೃಶ್ಯ

stoned to death in belagavi

ಬೆಳಗಾವಿ: ಕಲ್ಲಿನಿಂದ ಜಜ್ಜಿ ನಡು ಬೀದಿಯಲ್ಲೇ ಯುವಕನ ಬರ್ಬರ ಹತ್ಯೆ (Murder Case) ಮಾಡಿದ ಘಟನೆ ಬೆಳಗಾವಿಯ ಶಿವಬಸವನಗರದಲ್ಲಿ ತಡರಾತ್ರಿ ನಡೆದಿದೆ. ರಾಮನಗರ ನಿವಾಸಿ ನಾಗರಾಜ್ ಗಾಡಿವಡ್ಡರ್ (26) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.

ಮೃತ ನಾಗರಾಜ್

ರಾತ್ರಿ ನಾಗರಾಜ್‌ ಬರುತ್ತಿದ್ದಾಗ ಬೈಕ್ ಮೇಲೆ ಹಿಂಬಾಲಿಸಿಕೊಂಡು ಬಂದು ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಮೂರು ಜನ ಯುವಕರಿಂದ ನಾಗರಾಜ್ ಹತ್ಯೆಯಾಗಿದೆ. ತಲೆಗೆ ಕಲ್ಲು ಎತ್ತಿ ಹಾಕಿ ಯುವಕನ ಹತ್ಯೆ ಮಾಡುವ ಬರ್ಬರ ದೃಶ್ಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕ ತೆರಳುವ ಮಾರ್ಗದಲ್ಲಿ ಮೊದಲೇ ಬೈಕ್ ಮೇಲೆ ಕಲ್ಲು ಸಮೇತ ಬಂದು ನಿಂತಿದ್ದ ಮೂವರು ನಾಗರಾಜ್ ಗಾಡಿವಡ್ಡರ್ ಅದೇ ಮಾರ್ಗದಲ್ಲಿ ಹಾದು ಹೋಗುವಾಗ ಹತ್ಯೆ. ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಮೂವರ ಪೈಕಿ ಮಧ್ಯದಲ್ಲಿ ಕುಳಿತವ ಹತ್ಯೆ ನಡೆಸಿದ್ದಾನೆ. ಐದು ಬಾರಿ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಡಿಸಿಪಿ ಶೇಖರ್, ಎಸಿಪಿ ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವ ಕಳಿಸಲಾಗಿದೆ.

ಮಹಿಳೆ ಅನುಮಾನಾಸ್ಪದ ಸಾವು, ಅಂತ್ಯಸಂಸ್ಕಾರಕ್ಕೂ ಬಾರದ ಪತಿರಾಯ

ತುಮಕೂರು: ತುಮಕೂರಿನಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಗಂಡ ಎನಿಸಿಕೊಂಡಾತ ಅಂತ್ಯಸಂಸ್ಕಾರಕ್ಕೆ ಬರದೆ ಅಮಾನವೀಯತೆ ಮೆರೆದಿದ್ದಾನೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಕಲಾವತಿ (26) ಮೃತ ದುರ್ದೈವಿ. ಇವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲು ಶಂಕಿಸಲಾಗಿತ್ತು. ಇದೀಗ ಗಂಡ ಸೋಮಶೇಖರ್ ವಿರುದ್ಧ ಕಲಾವತಿ ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ. ಪತ್ನಿಯ ಅಂತ್ಯಸಂಸ್ಕಾರಕ್ಕೆ ಪತಿರಾಯನೇ ಬಾರದೆ ನಾಪತ್ತೆಯಾಗಿದ್ದು, ಗ್ರಾಮಸ್ಥರು ಆತನ ಮನೆಯ ಎದುರೇ ಶವವನ್ನು ಇಟ್ಟು ತಮ್ಮ ಮನೆ ಕಡೆ ನಡೆದಿದ್ದಾರೆ. ಹೀಗಾಗಿ

ಪತ್ನಿಯಿದ್ದರೂ ಮನೆಯ ಪಕ್ಕದ ಶೆಡ್‌ನಲ್ಲಿ ಅನ್ಯ ಸ್ತ್ರೀಯನ್ನು ಸೋಮಶೇಖರ್‌ ಕರೆತಂದು ಇಟ್ಟುಕೊಂಡಿದ್ದ. ಈ ವಿಚಾರವಾಗಿ ಪದೇ ಪದೇ ಗಂಡ ಹೆಂಡತಿಯ ನಡುವೆ ಗಲಾಟೆ ನಡೆಯುತ್ತಿತ್ತು. ನಿನ್ನೆಯೂ ಇದೇ ವಿಚಾರಕ್ಕೆ ಗಲಾಟೆ ನಡೆದು ಗಂಡನೇ ಹೆಂಡತಿಯನ್ನ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Double Murder: ತಮ್ಮನಿಂದಲೇ ಅಣ್ಣ-ಅತ್ತಿಗೆಯ ಬರ್ಬರ ಹತ್ಯೆ; ಆಸ್ತಿ ವಿಚಾರಕ್ಕೆ ಜೋಡಿ ಕೊಲೆ

Exit mobile version