Site icon Vistara News

Tumkur News: ಮೇಕೆಗೆ ಸೊಪ್ಪು ತರಲು‌ ಹೋಗಿ ಅಣ್ಣ, ತಮ್ಮ ನೀರುಪಾಲು

brothers drown in well

#image_title

ತುಮಕೂರು: ಮೇಕೆಗೆ ಸೊಪ್ಪು ತರಲು‌ ಹೋಗಿ ಅಣ್ಣ, ತಮ್ಮ ನೀರು ಪಾಲಾಗಿರುವ ಘಟನೆ (Tumkur News) ಜಿಲ್ಲೆಯ‌ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ನಡೆದಿದೆ.

ದ್ವಾರನಕುಂಟೆ ಗ್ರಾಮದ ಸತೀಶ್ (25), ಪ್ರಸನ್ನ (29) ಮೃತ ದುರ್ದೈವಿಗಳು. ಬಾವಿ ದಡದಲ್ಲಿ ಮೇಕೆಗೆ ಸೊಪ್ಪು ಕೊಯ್ಯುವ ವೇಳೆ ಮೊದಲಿಗೆ ಅಣ್ಣ ಪ್ರಸನ್ನ ನೀರಿಗೆ ಜಾರಿ ಬಿದ್ದಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಬಾವಿಗೆ ಇಳಿದ ಸಹೋದರ ಸತೀಶ್ ಕೂಡ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಅಗ್ನಿಶಾಮಕದಳ ಸಿಬ್ಬಂದಿ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದ ಪ್ರಿಯಕರ!

ವಿದ್ಯುತ್‌ ಶಾಕ್ ಹೊಡೆದು ವ್ಯಕ್ತಿ ಸಾವು

ಬಳ್ಳಾರಿ: ವಿದ್ಯುತ್ ತಂತಿ ಫಿಟ್ ಮಾಡಲು ಹೋಗಿ ವಿದ್ಯುತ್‌ ಶಾಕ್ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕುರುಗೋಡು‌ ಹೊರವಲಯದ ಜಮೀನಿನಲ್ಲಿ ನಡೆದಿದೆ. ಖಾಸಗಿ‌ ಎಲೆಕ್ಟ್ರಿಷಿಯನ್ ತಿಮ್ಮಪ್ಪ (37) ಮೃತ ವ್ಯಕ್ತಿ.. ಜಮೀನಿನಲ್ಲಿ ಕಂಬಕ್ಕೆ ಜೋತು ಬಿದ್ದ ವಿದ್ಯುತ್ ಫಿಟ್ ಮಾಡಲು ಹೋಗಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ತಿಮ್ಮಪ್ಪ ಮೃತಪಟ್ಟಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version