Site icon Vistara News

Drowned | ಶಿರಸಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

sirsi death

ಶಿರಸಿ: ತಾಲೂಕಿನ ಎಸಳೆ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು (Drowned) ನೀರುಪಾಲಾಗಿದ್ದಾರೆ. ಒಟ್ಟು ಐವರು ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಹ್ಮದ್ ರಾಜ್ ಜಾನಿಗೇರ್ (೧೪), ಖಾಸೀಂ ರಿಯಾಜ್ ಪಾಲಾ (೧೪) ಮೃತ ವಿದ್ಯಾರ್ಥಿಗಳಾಗಿದ್ದಾರೆ. ಶನಿವಾರ ಮಧ್ಯಾಹ್ನ ಇವರು ಈಜಲು‌ ತೆರಳಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಇಬ್ಬರ ಶವಗಳನ್ನು ಮೇಲಕ್ಕೆತ್ತಲಾಗಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | First Rank | 71ರ ಹರೆಯದಲ್ಲೂ ಸಿವಿಲ್‌ ಡಿಪ್ಲೊಮಾದಲ್ಲಿ ಮೊದಲ ರ‍್ಯಾಂಕ್‌ ಪಡೆದ ಶಿರಸಿಯ ನಾರಾಯಣ ಭಟ್‌!

Exit mobile version