Site icon Vistara News

Yadgir News: ಕೋಮು ಭಾವನೆಗೆ ಧಕ್ಕೆ ತರುವ ರೀಲ್ಸ್ ಮಾಡಿದ ಇಬ್ಬರು ಯುವಕರ ಬಂಧನ

Akbar Syed Bahadur Ali and Mohammad Ayaz

ಯಾದಗಿರಿ: ಕೋಮು ಭಾವನೆಗಳಿಗೆ ಧಕ್ಕೆ ತರುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಷನ್ 153, 505/2 ಅಡಿಯಲ್ಲಿ ಕೇಸ್ ದಾಖಲಿಸಿ ಯುವಕರನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

‌ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ ಮಾಡಿದವರ ತಲೆ ತೆಗೆಯಿರಿ ಎಂದು ಯುವಕರು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಾಕಿದ್ದರು. ಈ ಬಗ್ಗೆ ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಹೀಗಾಗಿ ಯಾದಗಿರಿ ನಗರದ ಅಕ್ಬರ್ ಸೈಯದ್ ಬಹದ್ದೂರ್ (23) ಹಾಗೂ ಎಂ.ಡಿ ಅಯಾಜ್ (21) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | Self Harming : ಭ್ರಷ್ಟಾಚಾರ ನಿಗ್ರಹ ತಂಡದ ಕಚೇರಿಯಲ್ಲಿ ಯುವಕ ನೇಣಿಗೆ ಶರಣು!

ಯುವಕರ ರೀಲ್ಸ್ ವಿಡಿಯೊವನ್ನು ಪ್ರಧಾನ ಮಂತ್ರಿಗಳಿಗೆ ಟ್ಯಾಗ್ ಮಾಡಿ ನೀರಜ್ ಅತ್ರಿ ಎಂಬ ವ್ಯಕ್ತಿ ಗಮನ ಸೆಳೆದಿದ್ದಾನೆ. ನಂತರ ಇಬ್ಬರು ಯುವಕರ ವಿರುದ್ಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ‌ ಕೇಸ್ ದಾಖಲಾಗಿದೆ. ನಾವು ಅಹ್ಲೇ ಸುನ್ನತ್ ಜಮಾತ್‌ನವರಾಗಿದ್ದೇವೆ. ನಮಗೆ ಬಾಲ್ಯದಿಂದ ಇದನ್ನೇ ಕಲಿಸಿಕೊಡಲಾಗಿದೆ ಎಂದಿರುವ ಇಬ್ಬರು ಯುವಕರು, ಜೀವನದಲ್ಲಿ ಎಲ್ಲಾ ಕಷ್ಟವನ್ನ ಎದುರಿಸಿ. ಆದರೆ, ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದರೆ, ಅಂತಹವರ ದೇಹದಿಂದ ರುಂಡವನ್ನು ಬೇರ್ಪಡಿಸಿ ಎಂದು ಯುವಕ ರೀಲ್ಸ್‌ನಲ್ಲಿ ಹೇಳಿದ್ದಾರನೆ.

ಮುಸಲ್ಮಾನರ ಮೇಲೆ ದೌರ್ಜನ್ಯ ಎಸಗುವವರೇ, ಯುವತಿರನ್ನು ಬುಟ್ಟಿಗೆ ಹಾಕಿಕೊಂಡು ಗಂಡಸು ಎಂದುಕೊಳ್ಳುವವರೇ, ಮುಸ್ಲಿಮರನ್ನೇ ಟಾರ್ಗೆಟ್ ಮಾಡುವವರೇ ನೀವು ಗಂಡಸರೇ ಆಗಿದರೆ 15 ನಿಮಿಷ ಮೈದಾನಕ್ಕೆ ಬನ್ನಿ ಎಂದು ಸವಾಲು ಹಾಕಿ, ಎಷ್ಟು ಹಾರಾಡ್ತೀರಾ ಹಾರಾಡಿ, ಈ ಜಗತ್ತಿನಲ್ಲಿ ಖುರಾನ್ ಬಹಳ ಸ್ಪಷ್ಟವಾಗಿ ಹೇಳುತ್ತಿದೆ, ಕಾಫಿರ್ (ಹಿಂದು) ಕೊನೆಗೆ ನಿಮ್ಮ ಸ್ಥಾನ ನರಕ ಎಂದು ಯುವಕರು ರೀಲ್ಸ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Leopard Attack: ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಅವರು, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ವಿಡಿಯೊ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಯುವಕರಿಬ್ಬರನ್ನು ಬಂಧಿಸಲಾಗಿದೆ, ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರೂ ಕೋಮು ಭಾವನೆಗೆ ಧಕ್ಕೆ ತರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಬಾರದು ಎಚ್ಚರಿಕೆ ನೀಡಿದ್ದಾರೆ.

Exit mobile version