Site icon Vistara News

LOVE JIHAD | ಹಿಂದೂ ಯುವತಿಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹ

kundapur

ಉಡುಪಿ: ಕುಂದಾಪುರ ತಾಲೂಕಿನ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಲವ್‌ ಜಿಹಾದ್‌ ಗೆ ಬಲಿಯಾಗಿದ್ದು, ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ.

ʼʼಯುವತಿ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಕೋಟೆಶ್ವರದ ನಿವಾಸಿ ಅಜೀಜ್‌ ಎಂಬಾತ ಮೋಸ ಮಾಡಿ, ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಹಿಂದೆ ಲವ್‌ ಜಿಹಾದ್‌ ಷಡ್ಯಂತ್ರವಾಗಿದೆ. ಹೀಗಾಗಿ ಮೃತಳಿಗೆ ನ್ಯಾಯ ಸಿಗಬೇಕಾದರೆ ಆರೋಪಿ ಬಂಧನವಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದುʼʼ ಎಂದು ಹಿಂದೂ ಮುಖಂಡ ಶಂಕರ್‌ ಅಂಕದಕಟ್ಟೆ ಒತ್ತಾಯಿಸಿದ್ದಾರೆ.

ʼʼಯುವತಿಯ ಆತ್ಮಹತ್ಯೆ ಕಾರಣವಾದ ಆರೋಪಿ ಮೂರು ನಾಲ್ಕು ವರ್ಷಗಳಿಂದ ಆಕೆಯ ಜತೆ ತಿರುಗಿ, ಲೈಂಗಿಕವಾಗಿ ದರ್ಬಳಕೆ ಮಾಡಿಕೊಂಡಿದ್ದಾನೆ. ಆರೋಪಿ ಮತ್ತು ಆತನ ಪತ್ನಿ ಯುವತಿ ಆತ್ಮಹತ್ಯೆ ನೇರ ಕಾರಣ. ಆರೋಪಿ ಅಜೀಜ್‌ ಮಾದಕ ವಸ್ತುಗಳ ಜಾಲ, ಅಕ್ರಮ ಗೋಸಾಗಾಟದಲ್ಲಿ ತೊಡಗಿಸಿಕೊಂಡಿದ್ದ. ಪೊಲೀಸರು ಲವ್‌ ಜಿಹಾದ್‌ ಆಯಾಮದಲ್ಲಿ ಪ್ರಕರಣವನ್ನು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕುʼʼ ಎಂದು ಹಿಂದೂ ಜಾಗರಣ ವೇದಿಕೆಯ ಸುರೇಂದ್ರ ಮಾರ್ಕೋಡು ಆಗ್ರಹಿಸಿದ್ದಾರೆ.

ಯುವತಿಯ ಕೈಬರಹ ಪತ್ತೆ
ಎರಡು ದಿನಗಳ ಹಿಂದೆಯಷ್ಟೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿಲ್ಪಾ ದೇವಾಡಿಗ ಬರೆದಿರುವ ಪತ್ರ ಪತ್ತೆಯಾಗಿದೆ. ಕೇವಲ ಬಾಹ್ಯ ಸೌಂದರ್ಯಕ್ಕಾಗಿ ನಿಮ್ಮನ್ನು ಪ್ರೀತಿಸುತ್ತಾರೆ, ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ, ಕೊನೆಗೆ ನಿಮಗೆ ಐ ಹೇಟ್ ಯು ಅನ್ನುತ್ತಾರೆ… ಹೀಗೆ ಅಜೀಜ್‌ನಿಂದ ಮೋಸ ಹೋದ ಯುವತಿ ಶಿಲ್ಪಾಳ ಕವನ ರೂಪದ ಕೈಬರಹ ಪತ್ತೆಯಾಗಿದೆ.

ಇದನ್ನೂ ಓದಿ | LOVE JIHAD| ಲವ್‌ ಜಿಹಾದ್‌ಗೆ ಕುಂದಾಪುರದ ಹಿಂದೂ ಯುವತಿ ಬಲಿ

Exit mobile version