Site icon Vistara News

ಮರವಂತೆ ಬೀಚ್ ಬಳಿ ಸಮುದ್ರಕ್ಕುರುಳಿದ ಕಾರು; ಚಾಲಕ ಸಾವು, ಮತ್ತೊಬ್ಬ ನಾಪತ್ತೆ, ಇಬ್ಬರ ರಕ್ಷಣೆ

ಕಾರು

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯ ಮರವಂತೆ ಬೀಚ್‌ ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಸಮುದ್ರಕ್ಕೆ ಉರುಳಿದ ಪರಿಣಾಮ ನಾಲ್ವರ ಪೈಕಿ ಚಾಲಕ ಮೃತಪಟ್ಟಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕೋಟೇಶ್ವರ ಗ್ರಾಮದ ಯುವಕ ವಿರಾಜ್ ಆಚಾರ್ಯ (28) ಮೃತ ವ್ಯಕ್ತಿ. ಕಾಡಿನಕೊಂಡ ನಿವಾಸಿ ರೋಷನ್‌ ಆಚಾರ್ಯ ನಾಪತ್ತೆಯಾಗಿದ್ದು, ಕಾಡಿನಕೊಂಡ ನಿವಾಸಿ ಕಾರ್ತಿಕ್‌ ಹಾಗೂ ಬಸ್ರೂರ್‌ ಮೂರುಕೈ ಬಳಿಯ ಸಂದೇಶ್‌ ಎಂಬುವವರನ್ನು ರಕ್ಷಿಸಲಾಗಿದೆ. ಶನಿವಾರ ತಡರಾತ್ರಿ ಮರವಂತೆ ಬೀಚ್‌ ಬಳಿ ಸಮುದ್ರಕ್ಕೆ ಕಾರು ನುಗ್ಗಿದೆ. ಈ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಕಾರು ಕೊಚ್ಚಿಹೋಗಿ ದುರಂತ ಸಂಭವಿಸಿದೆ. ಬೈಂದೂರು ಅಗ್ನಿಶಾಮಕ ದಳದಿಂದ ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಸಮುದ್ರಪಾಲಾದ ಓರ್ವನಿಗಾಗಿ ಹುಡುಕಾಟ ನಡೆದಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕೊಲ್ಲಾಪುರ ಬಳಿ ಭೀಕರ ಅಪಘಾತ, ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಮೃತ್ಯು

Exit mobile version