Site icon Vistara News

ಕುಂದಾಪುರ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ, ಜ್ಯುವೆಲ್ಲರಿ ಮಾಲೀಕನ ಸೆರೆ

ಕುಂದಾಪುರ: ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡ್‌ ಜ್ಯುವೆಲರ್ಸ್‌ ಮಾಲೀಕ ಗಣೇಶ್‌ ಶೆಟ್ಟಿ ಮೊಳಹಳ್ಳಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಕಟ್ಟೆ ಭೋಜಣ್ಣ ಶೆಟ್ಟಿ ಅವರು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಬಂಧಿತ ಆರೋಪಿ ಗಣೇಶ್‌ ಶೆಟ್ಟಿ ಅವರ ಮನೆಯ ಎದುರೇ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡಿದ್ದರು. ಡೆತ್‌ ನೋಟ್‌ನಲ್ಲೂ ಗಣೇಶ್‌ ಶೆಟ್ಟಿ ತಮಗೆ ಮೋಸ ಮಾಡಿದ್ದಾರೆ ಎಂದು ಬರೆದಿದ್ದರು.

ಇದನ್ನೂ ಓದಿ | ಅಳಿಯನ ಕೊಲೆ ಮಾಡಿ ತಪ್ಪೊಪ್ಪಿಗೆ ಪತ್ರ ಸ್ಟೇಟಸ್‌ ಹಾಕಿದ ಮಾವ

ಗಣೇಶ್‌ ಶೆಟ್ಟಿ ಮತ್ತು ಇಸ್ಮಾಯಿಲ್‌ ಪ್ರಚೋದನೆಯಿಂದ ತಂದೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಪುತ್ರ ಸುಧೀಂದ್ರ ದೂರು ಸಲ್ಲಿಸಿದ್ದರು. ಸೆಕ್ಷನ್‌ 306 ಅಡಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಿದ್ದಾರೆ. ಮೇ 30ರ ತನಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಮತ್ತೊಬ್ಬ ಆರೋಪಿ ಇಸ್ಮಾಯಿಲ್‌ ಗೆ ಶೋಧ ಮುಂದುವರಿದಿದೆ.

ಇದನ್ನೂ ಓದಿ | ಜುಗುರಾಜ್‌ ಕೊಲೆ‌ ಪ್ರಕರಣ: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ..

Exit mobile version