Site icon Vistara News

ಮಂಡ್ಯ ಹೊಳೆ ಆಂಜನೇಯಸ್ವಾಮಿ ದೇವರಿಗೆ ಒಂದೂ ಕಾಲು ರೂಪಾಯಿ ಹರಕೆ ತೀರಿಸಿದ ಕೇಂದ್ರ ಸಚಿವ!

mandya minister

ಮಂಡ್ಯ: ಮದ್ದೂರು ಪಟ್ಟಣದಲ್ಲಿರುವ ಹೆಸರಾಂತ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ಭೇಟಿ ನೀಡಿದ್ದು, ಆಂಜನೇಯನಿಗೆ ಹರಕೆ ಹೊತ್ತುಕೊಂಡು ತೀರಿಸಿದ್ದಾರೆ.

ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾಗಿರುವ ಗುರ್ಜರ್‌ ಅವರು ಮದ್ದೂರು ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಅದರ ಹಿರಿಮೆ ಬಗ್ಗೆ ತಿಳಿದುಕೊಂಡ ಸಚಿವರು ದೇಗುಲಕ್ಕೂ ಭೇಟಿ ನೀಡಿದ್ದಾರೆ.

ಇಷ್ಟಾರ್ಥ ಸಿದ್ಧಿಗಾಗಿ ಹರಕೆ
ಹೊಳೆ ಆಂಜನೇಯಸ್ವಾಮಿ ದೇವರಿಗೆ ಒಂದೂ ಕಾಲು ರೂಪಾಯಿ ಹರಕೆ ಹೊತ್ತು ತೀರಿಸಿದರೆ, ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಂತೆ ಅವರು ಭಕ್ತಿಯಿಂದ ಹರಕೆ ಕಟ್ಟಿಕೊಂಡು ಹರಕೆ ಪೂಜೆ ನೆರವೇರಿಸಿದ್ದಾರೆ.

ಪೂರ್ಣಕುಂಭ ಸ್ವಾಗತ
ಸಚಿವರು ದೇವಸ್ಥಾನಕ್ಕೆ ಬರುವ ವಿಷಯ ತಿಳಿದ ಸ್ಥಳೀಯರು ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸಚಿವ ಗುರ್ಜರ್‌ ಅವರು ಆಗಮಿಸುತ್ತಿದ್ದಂತೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ದೇವಸ್ಥಾನದ ಬಗ್ಗೆ ವಿವರಣೆಯನ್ನು ಪಡೆದುಕೊಂಡ ಸಚಿವರು, ವೀಕ್ಷಣೆ ಮಾಡಿದರು. ಅಲ್ಲದೆ, ಹರಕೆ ಕಟ್ಟಿಕೊಂಡು ತಮ್ಮ ಇಷ್ಟಾರ್ಥ ಸಿದ್ಧಸಲಿ ಎಂದು ಪ್ರಾರ್ಥಿಸಿದರು.

ಇದನ್ನೂ ಓದಿ | ಕೋಟಿ ಕಂಠ ಗಾಯನ| ಕಾರವಾರದ ಸದಾಶಿವಗಡದಲ್ಲಿ ಬಿಸಿಲಿಗೆ ಬಸವಳಿದ ಮಕ್ಕಳು, ಪೆಂಡಾಲ್‌ ವ್ಯವಸ್ಥೆ ಇಲ್ಲ!

Exit mobile version