Site icon Vistara News

ಶರಾವತಿ ನದಿಯಲ್ಲಿ ದೋಣಿ ಮಗುಚಿ ಒಬ್ಬ ನಾಪತ್ತೆ

ಒರ್ವ ವ್ಯಕ್ತಿ ನಾಪತ್ತೆ:

ಹೊನ್ನಾವರ: ಹೊನ್ನಾವರ ತಾಲೂಕಿನ ನಗರೆ, ಮಾವಿನಕುರ್ವಾದ ಶರಾವತಿ ನದಿಯಲ್ಲಿ ದೋಣಿ ಮಗುಚಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ನದಿಯಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಬೋಟಿನ ಓಡಾಟದ ವೇಗದ ಪರಿಣಾಮವಾಗಿ ಈ ದೋಣಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ದೋಣಿಯಲ್ಲಿದ್ದ ಮೂರು ಮಂದಿ ನೀರಿಗೆ ಬಿದ್ದಿದ್ದರು. ಅವರಲ್ಲಿ ಮಾವಿನಕುರ್ವಾ ಗ್ರಾ. ಪಂ ಸದಸ್ಯ ಪೀಟರ್ ಮೆಂಡಿಸ್ಸಾ ಮತ್ತು ಜೆಲ್ವಿನ್ ಡಯಾಸ್ ಅವರನ್ನು ಗ್ರಾಮದ ಬೆಸ್ತಾಂವ್ ಎಂಬುವರು ನೀರಿಗೆ ಧುಮುಕಿ ರಕ್ಷಣೆ ಮಾಡಿದರು. ಆದರೆ ಪ್ರಕಾಶ ಫರ್ನಾಂಡಿಸ್ ಎಂಬುವರು ನಾಪತ್ತೆಯಾಗಿದ್ದಾರೆ. ಸ್ಥಳಿಯರ ಸಹಕಾರದಿಂದ ಪೊಲೀಸರು ನಾಪತ್ತೆಯಾದವನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಹೊಲವನ್ನೆ ನಾಶ ಮಾಡುತ್ತಿರುವ ಸೈನಿಕ ಹುಳುಗಳು

Exit mobile version