Site icon Vistara News

ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ, ಆತ್ಮಹತ್ಯೆಗೆ ಯತ್ನ

ಪೆಟ್ರೋಲ್ ಸುರಿದು

ಶಿರಸಿ: ಮದ್ಯದ ಅಮಲಿನಲ್ಲಿ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ತಾನೂ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮದ ಗಣೇಶ ನಗರದಲ್ಲಿ ನಡೆದಿದೆ.

ಖಾಸಗಿ ವಾಹನ ಚಾಲಕ ಗುತ್ಯ ಸಣ್ಣಹುಡುಗ ಚೆನ್ನಯ್ಯ (56) ಕೃತ್ಯ ಎಸಗಿದವ. ಶುಕ್ರವಾರ ಮಿತಿ ಮೀರಿ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ರೇಣುಕಾ ಗುತ್ಯಾ ಚನ್ನಯ್ಯ (45) ಜತೆಗೆ ಜಗಳವಾಡಿದ್ದಾನೆ. ಬಳಿಕ ಕೋಪದಿಂದ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೈ,ಕಾಲುಗಳಿಗೆ ಸುಟ್ಟ ಗಾಯಗಳಾದ ಅವರನ್ನು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಹೆದರಿದ ಗುತ್ಯ ಸಣ್ಣಹುಡುಗ ಚೆನ್ನಯ್ಯನೂ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ. ಸ್ಥಳೀಯರು ಆತನನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಗ್ಯಾಸ್ ಕಟ್ಟರ್‌ ಬಳಸಿ, ಕೆಇಬಿ ಲಾಕರ್‌ ಕಟ್‌ ಮಾಡಿ ಹಣ ದೋಚಿ ಪರಾರಿಯಾದ ಖದೀಮರು

Exit mobile version