Site icon Vistara News

Vistara News Launch | ವಿಸ್ತಾರ News ಚಾನೆಲ್‌ ಆಗದೆ Views ಚಾನೆಲ್‌ ಆಗಲಿ, ವಚನಾನಂದ ಶ್ರೀ ಆಶೀರ್ವಚನ

Swamiji

ಬೆಂಗಳೂರು: ವಿಸ್ತಾರ ನ್ಯೂಸ್‌ ಚಾನೆಲ್‌ (Vistara News Launch) ಹತ್ತಾರು ಕಾರಣಗಳಿಂದಾಗಿ ವಿಭಿನ್ನವಾಗಿದೆ. ಇದೊಂದು ಕೇವಲ News ಚಾನೆಲ್‌ ಆಗದೆ Views ಚಾನೆಲ್‌ ಆಗಲಿ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಯಾವುದೇ ಮಾಧ್ಯಮವು ಕಾರ್ಯನಿರ್ವಹಿಸಲು ಆರಂಭಿಸಿದ ಪ್ರಾರಂಭಿಕ ವರ್ಷಗಳಲ್ಲಿ ಲಾಭ ಗಳಿಸಲು ಆಗುವುದಿಲ್ಲ. ಹಾಗಾಗಿ, ಮಾಧ್ಯಮಗಳು ಮೊದಲ ಎರಡು ವರ್ಷ ಲಾಭ ನಷ್ಟದ ಲೆಕ್ಕ ಹಾಕದೆ ಜನಪರವಾಗಿ ಕಾರ್ಯನಿರ್ವಹಿಸಲಿ. ಇದೇ ದಿಸೆಯಲ್ಲಿ ಸಾಗಿ ವಿಸ್ತಾರ ನ್ಯೂಸ್‌ ನಾಡಿಗೆ ದಾರಿದೀಪವಾಗಲಿ” ಎಂದು ಆಶಿಸಿದರು.

“ನನಗೆ ಹರಿಪ್ರಕಾಶ್‌ ಕೋಣೆಮನೆ ಅವರು 10-12 ವರ್ಷಗಳಿಂದ ಆತ್ಮೀಯರಾಗಿದ್ದಾರೆ. ಅವರ ವೃತ್ತಿ ಬದ್ಧತೆಯ ಪರಿಚಯ ನನಗಿದೆ. ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಒಂಬತ್ತು ಭಾಷೆಗಳಲ್ಲಿ ಲಭ್ಯವಿರುವುದೇ ಅದರ ವಿಭಿನ್ನತೆ ಹಾಗೂ ಸಂಪಾದಕರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ವಿಸ್ತಾರ ನಾಡಿನ ಜನರ ನಾಡಿಮಿಡಿತವಾಗಲಿ” ಎಂದರು.

ಇದನ್ನೂ ಓದಿ | Vistara News Launch | ಮಾಧ್ಯಮಗಳಿಗೆ ವಿಸ್ತಾರ ನ್ಯೂಸ್‌ ಮೇಲ್ಪಂಕ್ತಿ ಆಗಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ

Exit mobile version