Site icon Vistara News

Vijayanagara News: ಕೆರೆಯಲ್ಲಿ ಮುಳುಗಿ ಎತ್ತುಗಳ ಸಾವು: ರೈತ ಅಸ್ವಸ್ಥ

Vijayanagara News Bulls drown in lake and die Farmer sick

ಹೊಸಪೇಟೆ: ಕೆರೆಯಲ್ಲಿ ಮೈ ತೊಳೆಯಲೆಂದು ಹೋಗಿದ್ದ ಎತ್ತುಗಳು (Lake) ನೀರಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ (Bulls) ತಾಲೂಕಿನ ಹಾರುವನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ಚಿಲಕನಹಟ್ಟಿ ಗ್ರಾಮದ ಬಳಿಯಿರುವ ಮಾರ್ಗದಯ್ಯನ ಕೆರೆಯಲ್ಲಿ ಎತ್ತುಗಳು ಮುಳುಗಿ ಮೃತಪಟ್ಟಿದ್ದರೆ, ರೈತ ಹನುಮಂತಪ್ಪ ಕೆರೆಯಲ್ಲಿ ಎತ್ತುಗಳನ್ನು ಮೈ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: Drowned in pond : ಕುರಿ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ಟೈರ್ ಬಂಡಿ ಕಟ್ಟಿಕೊಂಡು ಎರಡು ಎತ್ತುಗಳನ್ನು ಮೈ ತೊಳೆಯಲು ರೈತ ಹನುಂಮತಪ್ಪ ಕೆರೆಗೆ ಬಂದಿದ್ದ. ಈ ವೇಳೆ ಎತ್ತುಗಳು ಬೆದರಿ ಇದ್ದಕ್ಕಿದ್ದಂತೆ ಗುಂಡಿಗೆ ಬಿದ್ದಿವೆ. ಚಕ್ಕಡಿಗೆ ಎತ್ತುಗಳನ್ನು ಕಟ್ಟಿದ್ದರಿಂದ ಈಜುಲು ಸಾಧ್ಯವಾಗದೆ ಎತ್ತುಗಳು ಮುಳುಗಿ ಮೃತಪಟ್ಟಿವೆ. ಇನ್ನು ಹನುಂಮತಪ್ಪ ಅವರು ಸಹ ನೀರಲ್ಲಿ ಮುಳುಗಿ ಅಸ್ವಸ್ಥರಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version