Site icon Vistara News

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ 2 ಕುಟುಂಬಗಳ ಮಧ್ಯೆ ಬಡಿದಾಟ; ಇಬ್ಬರಿಗೆ ಗಾಯ, ನಾಲ್ವರ ಬಂಧನ

Vijayanagara News

ವಿಜಯನಗರ: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬ ಮಧ್ಯೆ ನಡೆದ ಬಡಿದಾಟದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ (Vijayanagara News) ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಮೊನ್ನೆ ಹನಸಿ ಗ್ರಾಮದಲ್ಲಿ ಶ್ರೀ ಪರಮೇಶ್ವರಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಜರುಗಿತ್ತು. ಜಾತ್ರೆಯ ಪ್ರಯುಕ್ತ ಬಣ್ಣ ಹಚ್ಚುವ ವಿಚಾರಕ್ಕೆ ಎರಡು ಕುಟುಂಬಸ್ಥರು ಜಗಳ ಮಾಡಿಕೊಂಡಿದ್ದರು. ಹಳೇಯ ದ್ವೇಷ ಹಿನ್ನೆಲೆ ಮತ್ತೆ ಎರಡು ಕಡೆಯಯವರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರಿಗೆ ಗಾಯಗಳಾಗಿವೆ.

ವಾಲ್ಮೀಕಿ ಸಮುದಾಯದ ಶಿವಕುಮಾರ್, ಗಂಗಾಮತ ಸಮಾಜದ ಕೊಟ್ರೇಶ ಎನ್ನುವವರ ಕುಟುಂಬದ ನಡುವೆ ಗಲಾಟೆ ನಡೆದಿದೆ. ಕೊಟ್ರೇಶ್‌ಗೆ ಹೊಡೆದಿದ್ದಕ್ಕೆ ಸಹೋದರ ಬಸವರಾಜ್ ಹೋಗಿ ಶಿವಕುಮಾರ್ ಜೊತೆ ಜಗಳಕ್ಕೆ ನಿಂತಿದ್ದಾರೆ. ಹೀಗಾಗಿ ಮಾತಿಗೆ ಮಾತು ಬೆಳೆದು ದೊಣ್ಣೆ, ಕಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಶಿವಕುಮಾರ್ ಸಹೋದರ ಮಾರುತಿ, ಕೊಟ್ರೇಶ್ ಹಾಗೂ ಬಸವರಾಜ್ ಮೇಲೆ ಪ್ರತಿದಾಳಿ ಮಾಡಿದ್ದಾರೆ. ಗಲಾಟೆಯಲ್ಲಿ ಮಾರುತಿ ಎಂಬುವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Begging Case : ಕುಡುಕ ಗಂಡನ ಮಾತು ಕೇಳಿ ಮಗು ಜತೆಗೆ ಭಿಕ್ಷಾಟನೆಗಿಳಿದ ತಾಯಿ

ಎರಡೂ ಕಡೆಯವರಿಂದ ಕೂಡ್ಲಿಗಿ ಠಾಣೆಯಲ್ಲಿ ದೂರು-ಪ್ರತಿದೂದು ದಾಖಲಿಸಲಾಗಿದ್ದು, ಹನಸಿ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸ್ಥಳದಲ್ಲಿ ಕೂಡ್ಲಿಗಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ರಾಯಚೂರಿನಲ್ಲಿ ಬಿಜೆಪಿ ಶಾಸಕನಿಗೆ ಚಾಕು ತೋರಿಸಿದ ಅಪರಿಚಿತ; ಹಲ್ಲೆಗೆ ಯತ್ನ, ಅಪಾಯದಿಂದ ಜಸ್ಟ್‌ ಮಿಸ್‌

Assault Case.. A person assaulted and Bjp MLA Shivraj Patil

ರಾಯಚೂರು: ರಾಯಚೂರು ನಗರದ ಬಿಜೆಪಿ ಶಾಸಕರಿಗೆ ವ್ಯಕ್ತಿಯೊಬ್ಬ ಚಾಕು ತೋರಿಸಿ ಹಲ್ಲೆಗೆ (Assault Case) ಯತ್ನಿಸಿದ್ದಾನೆ. ಬಿಜೆಪಿ ಶಾಸಕ ಶಿವರಾಜ್ ಪಾಟೀಲ್‌ ರಾಯಚೂರಿನ ಗದ್ವಾಲ್ ರಸ್ತೆಯಲ್ಲಿ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಈ ವೇಳೆ ಏಕಾಏಕಿ ಶಾಸಕರ ಬಳಿ ಬಂದ ಅಪರಿಚಿತ ಚಾಕು ತೋರಿಸಿ ಹಲ್ಲೆಗೆ ಯತ್ನಿಸಿದ್ದಾನೆ.

ಹಲ್ಲೆಗೆ ಯತ್ನಿಸಿದವನ್ನು ಚಾಂದಪಾಶಾ ಎಂದು ಗುರುತಿಸಲಾಗಿದೆ. ಮದ್ಯ ವ್ಯಸನಿಯಾಗಿರುವ ಚಾಂದಪಾಶಾ, ಶಾಸಕ ಶಿವರಾಜ್‌ ಪಾಟೀಲ್‌ರನ್ನು ಮನಬಂದಂತೆ ನಿಂದಿಸಿ ಹಲ್ಲೆಗೈಯಲು ಯತ್ನಿಸಿದ್ದಾನೆ. ಈ ವೇಳೆ ಬೆಂಬಲಿಗರು ತಡೆಯಲು ಹೋದಾಗ ಚಾಕು ತೋರಿಸಿದ್ದಾನೆ. ಕೂಡಲೇ ಆತನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಈ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್, ಆತ ಮದ್ಯ ವ್ಯಸನಿ ಎಂದು ತಿಳಿದು ಬಂದಿದೆ. ಕುಡಿದು ಬಂದು ಈ ರೀತಿಯ ಕೃತ್ಯ ಎಸಗಿದ್ದಾನೆ. ಬೆಳಗಿನಿಂದ ಈ ಸಂಬಂಧ ಸಾಕಷ್ಟು ಜನರು ಕರೆ ಮಾಡಿ ಕೇಳುತ್ತಿದ್ದಾರೆ. ಆದರೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ. ಇದರ ಹಿಂದೆ ಯಾವುದೇ ಷಡ್ಯಂತ್ರ ಇಲ್ಲವೆನಿಸುತ್ತೆ. ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ: Physical Abuse : ದಾರಿಯುದ್ದಕ್ಕೂ ಪುಂಡರ ಚೇಸಿಂಗ್‌; ಕಾರಿನಲ್ಲಿದ್ದ ಯುವತಿಯರನ್ನು ಸುತ್ತುವರಿದು ಟಾರ್ಚರ್‌

ಆತ ನಗರಸಭೆ ವಾರ್ಡ್‌ ನಂ23ರಲ್ಲಿ ವಾಸವಿರುವುದು ತಿಳಿದು ಬಂದಿದೆ. ಅಲ್ಲಿನ ಕೌನ್ಸಲರ್‌ಗೂ ನಮ್ಮ ಮುಖಂಡರು ಮಾತನಾಡಿದ್ದಾರೆ. ಆತ ಪ್ರತಿ ದಿನ ಇದೇ ರೀತಿ ಕುಡಿದು ಬಂದು ಮನೆಯವರಿಗೆ, ಮಕ್ಕಳಿಗೆ ಹಿಂಸೆ ಮಾಡುತ್ತಾನೆ ಎಂದು ಹೇಳಿದ್ದಾರೆ. ನನಗೆ ವೈಯಕ್ತಿಕವಾಗಿ ದ್ವೇಷ ಮಾಡುವಂತವರು ಯಾರೂ ಇಲ್ಲ, ನಾನು ಒಬ್ಬನೇ ಓಡಾಡುವ ವ್ಯಕ್ತಿ. ನಾನು ಗನ್ ಮ್ಯಾನ್‌ ಸಹ ಬೇಡ ಎಂದಿದ್ದೆ, ಆದರೂ ಕೊಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

Exit mobile version