Site icon Vistara News

Heart Attack: ಬಸ್ಸು ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ಸಾವು, ಸಮಯಪ್ರಜ್ಞೆ ಮೆರೆದ ಕಂಡಕ್ಟರ್‌

driver heartfail

ವಿಜಯಪುರ: ಬಸ್‌ ಓಡಿಸುವಾಗಲೇ ಡ್ರೈವರ್‌ ಹೃದಯಾಘಾತದಿಂದ ಸಾವಿಗೀಡಾದ ಘಟನೆ (driver heart fail) ಸಿಂದಗಿ ನಗರದಲ್ಲಿ ನಡೆದಿದೆ. ಪರಿಣಾಮ ಬಸ್ಸು ಪೆಟ್ರೋಲ್‌ ಬಂಕ್‌ಗೆ ನುಗ್ಗಿದೆ.

ವಿಜಯಪುರ ಜಿಲ್ಲೆ ಸಿಂದಗಿ ನಗರದಲ್ಲಿ ಘಟನೆ ನಡೆದಿದೆ. ಕಲ್ಬುರ್ಗಿ ಜಿ. ಅಪ್ಜಲಪುರದಿಂದ ವಿಜಯಪುರಕ್ಕೆ ಹೊರಟಿದ್ದ ಸರ್ಕಾರಿ ಬಸ್ ಅನ್ನು ಚಲಾಯಿಸುತ್ತಿದ್ದ ಮುರಿಗೆಪ್ಪ ಅಥಣಿ ಅವರಿಗೆ ಹೃದಯಾಘಾತ ಉಂಟಾದ ಪರಿಣಾಮ ಸ್ಟಿಯರಿಂಗ್‌ ಹಿಡಿದುಕೊಂಡೇ ಸಾವನ್ನಪ್ಪಿದ್ದಾರೆ.

ಇದರ ಪರಿಣಾಮ ಬಸ್ಸು ಇದ್ದಕ್ಕಿದ್ದಂತೆ ಪೆಟ್ರೋಲ್‌ ಬಂಕ್‌ಗೆ ನುಗ್ಗಿದೆ. ಕೂಡಲೇ ಕಂಡಕ್ಟರ್ ಶರಣು ಟಾಕಳಿ ಸಮಯಪ್ರಜ್ಞೆ ಮೆರೆದು ಬ್ರೇಕ್‌ ತುಳಿದು ಬಸ್ಸು ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಬಸ್ ಹೆಡ್‌ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಸಿಂದಗಿ ಡಿಪೋಗೆ ಹೊರಟಿತ್ತು. ದಾರಿ ಮಧ್ಯೆ ಡ್ರೈವರ್ ಮುರಿಗೆಪ್ಪ ಅಥಣಿಗೆ ಹೃದಯಾಘಾತವಾಗಿದೆ. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದಿದ್ದುರಿಂದ ಸಂಭವನೀಯ ಅಪಾಯ ತಪ್ಪಿದೆ. ವಿಷಯ ತಿಳಿದು ಅಪ್ಜಲಪುರ ಡಿಪೋ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Honey Bee Attack: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಡ್ಯಾಂಗೆ ಹಾರಿದ ಬಾಲಕ; ಈಜಲಾಗದೆ ಮುಳುಗಿ ಸಾವು

Exit mobile version